ಕೋಲ್ಕತ್ತಾ:ನಟಿ ಕಂಗನಾ ರನೌತ್ ಹೆಸರು ಬಳಸಿಕೊಂಡು ಶಿವಸೇನೆ ಸಂಸದ ಸಂಜಯ್ ರಾವತ್ಗೆ ಬೆದರಿಕೆ ಹಾಕಿದ ಕೋಲ್ಕತ್ತಾ ಮೂಲದ ಯುವಕನೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಂಗನಾ ಅಭಿಮಾನಿಯೆಂದು ಸಂಜಯ್ ರಾವತ್ಗೆ ಬೆದರಿಕೆ: ಯುವಕನ ಬಂಧನ - ಮುಂಬೈ ಪೊಲೀಸರು
ಕಂಗನಾ ಅಭಿಮಾನಿಯೆಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ಗೆ ಬೆದರಿಕೆ ಹಾಕಿದ ಯುವಕನನ್ನು ಕೋಲ್ಕತ್ತಾದಲ್ಲಿ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೋಲ್ಕತ್ತಾದ ಟೋಲಿಗಂಜ್ ನಗರದ ನಿವಾಸಿ ಪಲಾಶ್ ಘೋಷ್ ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಅಭಿಮಾನಿಯೆಂದು ಹೇಳಿಕೊಂಡು ಸಂಜಯ್ ರಾವತ್ಗೆ ಬೆದರಿಕೆ ಹಾಕಿದ್ದಾನೆ ಎಂದು ರಾವತ್ ದೂರು ನೀಡಿದ್ದರು. ಇಂದು ಬೆಳಗ್ಗೆ ಕೋಲ್ಕತ್ತಾ ಪೊಲೀಸರ ಜೊತೆ ಪಲಾಶ್ ಘೋಷ್ ನಿವಾಸಕ್ಕೆ ತೆರಳಿದ ಮುಂಬೈ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ, ಡ್ರಗ್ಸ್ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ ಬಳಿಕ ಕಂಗನಾ ಹಾಗೂ ಸಂಜಯ್ ರಾವತ್ ನಡುವೆ ಕಾದಾಟ ಆರಂಭವಾಗಿದೆ. ಇದರ ನಡುವೆಯೇ ರಾವತ್ಗೆ ಬೆದರಿಕೆ ಹಾಕಿದ ಯುವಕನೀಗ ಅರೆಸ್ಟ್ ಆಗಿದ್ದು, ಕೋಲ್ಕತ್ತಾ ಸಿಟಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಬಳಿಕ ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.