ಕರ್ನಾಟಕ

karnataka

ETV Bharat / bharat

ಮಿಷನ್​ ಶಕ್ತಿ ಬಗ್ಗೆ ಪ್ರಧಾನಿ ಭಾಷಣ: ಮೋದಿ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ - ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ಡಿಆರ್​ಡಿಒ ಸಾಧನೆಯ ಬಗ್ಗೆ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರೀತಿಗೆ ಈಗ ಪ್ರತಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಗರಂ ಆಗಿದ್ದಾರೆ. ಸಿಪಿಐಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಮಮತಾ ಬ್ಯಾನರ್ಜಿ

By

Published : Mar 27, 2019, 7:49 PM IST

ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ವಿರೋಧಿ ಉಪಗ್ರಹಗಳ ದಮನ ಮಾಡುವ ಎ- ಸ್ಯಾಟ್​​ ಯಶಸ್ವಿ ಪರೀಕ್ಷೆ ನಡೆಸಿದ ವಿಷಯದ ಬಗ್ಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣಕ್ಕೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಡಿಆರ್​ಡಿಒ ಎ- ಸ್ಯಾಟ್​ ಮೂಲಕ ನಿಗದಿತ ಉಪಗ್ರಹವನ್ನು ಹೊಡೆದುರುಳಿಸುವ ಮೂಲಕ ಈ ವ್ಯವಸ್ಥೆ ಅಳವಡಿಸಿಕೊಂಡ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಮ್ಮೆಗೆ ಕೂಡಾ ಪಾತ್ರವಾಗಿತ್ತು.ಈ ಹಿನ್ನೆಲೆಯಲ್ಲಿ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ವಿಜ್ಞಾನಿಗಳನ್ನ ಶ್ಲಾಘಿಸಿದ್ದರು.

ಹೆಚ್ಚಿನ ಓದಿಗಾಗಿ:

ಎರಡು ಸರ್ಕಾರದ ನಡುವೆ ಸಾಗಿ ಬಂದ ಮಿಷನ್ ಶಕ್ತಿ ಏನು..? ಮೋದಿ ಭಾಷಣದ ಉದ್ದೇಶದ ಹಿಂದಿದೆ ಈ ಗುರಿ..!

ಪ್ರಧಾನಿಗಳ ಈ ಭಾಷಣ ಈಗ ವಿವಾದಕ್ಕೀಡಾಗಿದೆ.ಪ್ರಧಾನಿ ಭಾಷಣವನ್ನ ಪೊಲಿಟಿಕಲ್​ ಗಿಮಿಕ್​ ಅಂದಿರುವ ಮಮತಾ ಬ್ಯಾನರ್ಜಿ, ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ಪ್ರಕಟಿಸುವ ಅಗತ್ಯವೇನಿತ್ತು. ಅದನ್ನ ಅವರೇ ಸುದ್ಧಿಗೋಷ್ಠಿ ನಡೆಸಿ ಹೇಳಿಕೊಳ್ಳುತ್ತಿದ್ದರು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ವಿಜ್ಞಾನಿಗಳ ಕ್ರೆಡಿಟ್​ ಅನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ತಾವು ತೆಗೆದುಕೊಂಡಿದ್ದಾರೆ ಎಂದು ಸಿಡಿಮಿಡಿಗೊಂಡಿರುವ ದೀದಿ, ಒಂದೇ ಒಂದು ಉಪಗ್ರಹ ಹೊಡೆದುರಳಿಸಲಾಗಿದೆ. ಈ ಬಗ್ಗೆ ಘೋಷಣೆ ಮಾಡುವ ಅಗತ್ಯವಿರಲಿಲ್ಲ. ಮೋದಿ ಸುಳ್ಳುಗಳ ಸರಮಾಲೆಯನ್ನ ಹೆಣೆಯುತ್ತಲೇ ಬಂದಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಹೇಳಿದ್ದಾರೆ.

ಇನ್ನೊಂದೆಡೆ, ಸಿಪಿಐ(ಎಂ) ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ದೂರು ನೀಡಿದೆ.ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೇಲಾಗಿ ಅವರು ಅಭ್ಯರ್ಥಿಯಾಗಿರುವಾಗ ಮಿಷನ್​ ಶಕ್ತಿ ಘೋಷಣೆ ಮಾಡುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದೆ.ಇದು ನಿಚ್ಚಳವಾಗಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದೂ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.

ABOUT THE AUTHOR

...view details