ಕರ್ನಾಟಕ

karnataka

ರನ್​ ವೇ ಬಿಟ್ಟು ಗದ್ದೆಯಲ್ಲಿ ಲ್ಯಾಂಡ್​​​​​ ಆದ ವಿಮಾನ​​​... ಬೆಂಗಳೂರಿನಲ್ಲಿ ತಪ್ಪಿದ ಅನಾಹುತ!

By

Published : Nov 14, 2019, 5:07 PM IST

Updated : Nov 14, 2019, 7:45 PM IST

ಹವಾಮಾನ ವೈಪರೀತ್ಯದಿಂದಾಗಿ ವಿಮಾನವೊಂದು ರನ್​ ವೇ ಬಿಟ್ಟು ಬೇರೆಡೆ ಲ್ಯಾಂಡ್​ ಆಗಿರುವ ಘಟನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದೆ.

ರನ್​ ವೇ ಬಿಟ್ಟು ಗದ್ದೆಯಲ್ಲಿ ಲ್ಯಾಡ್​ ಆದ ವಿಮಾನ

ಬೆಂಗಳೂರು:ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ​ವೊಂದು ರನ್​ ವೇ ಬಿಟ್ಟು ಪಕ್ಕದ ಗದ್ದೆಯಲ್ಲಿ ಲ್ಯಾಂಡ್​ ಆಗಿರುವ ಘಟನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದೆ.

ಕಳೆದ ನವೆಂಬರ್​ 11ರಂದು ಈ ಘಟನೆ ನಡೆದಿದ್ದು, ಪ್ರಯಾಣಿಕರನ್ನ ಹೊತು ತರುತ್ತಿದ್ದ ಗೋ ಏರ್​ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ರನ್​ ವೇ ಬಿಟ್ಟು ಪಕ್ಕದ ಗದ್ದೆಗೆ ಲ್ಯಾಂಡ್​ ಆಗಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಎಲ್ಲರೂ ಸೇಪ್​ ಆಗಿದ್ದು, ಘಟನೆಗೆ ಏನು ಕಾರಣ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

ಕಳಪೆ ಮಟ್ಟದ ಹವಾಮಾನವಿದ್ದರೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋ ಏರ್​​ 320 ಜೆಟ್ ನಾಗ್ಪುರಕ್ಕೆ ತೆರಳಲು​​ ಟೇಕ್​ ಆಫ್​ ಆಗಿತ್ತು. ಈ ವೇಳೆ ಇದರಲ್ಲಿ 180 ಪ್ಯಾಸೆಂಜರ್​ ಇದ್ದರು ಎಂದು ತಿಳಿದು ಬಂದಿದೆ.

ಇದೀಗ ಘಟನೆಯ ಪ್ರಾಥಮಿಕ ತನಿಖೆ ನಡೆಸಿರುವ ವಿಮಾನಯಾನ ಸಿಬ್ಬಂದಿ ಪೈಲೆಟ್​ ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

Last Updated : Nov 14, 2019, 7:45 PM IST

ABOUT THE AUTHOR

...view details