ತಿರುವನಂತಪುಂ:ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇಂದು 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ಸಚಿವ ಥಾಮಸ್ ಐಸಾಕ್ ವಾರ್ಷಿಕ ಆಯ್ಯ-ವ್ಯಯ ಮಂಡನೆ ಮಾಡಿದ್ರು. ಈ ವೇಳೆ ಬಜೆಟ್ ಪುಸ್ತಕ ಎಲ್ಲರ ಗಮನ ಸೆಳೆದಿದೆ.
ಬಜೆಟ್ನ ಕವರ್ಪೇಜ್ ಮೇಲೆ ಗಾಂಧಿ ಹತ್ಯೆ ಚಿತ್ರ... ಗಮನ ಸೆಳೆದ ಬಜೆಟ್ ಪುಸ್ತಕ! - ಬಜೆಟ್ನ ಕವರ್ಪೇಜ್
ಬಜೆಟ್ ಇತಿಹಾಸದಲ್ಲೇ ಕೇರಳ ಸರ್ಕಾರ ವಿಶೇಷ ಕ್ರಮ ಕೈಗೊಂಡಿದ್ದು, ಇದೀಗ ಅವರ ಬಜೆಟ್ ಮಂಡನೆ ಪುಸ್ತಕ ಎಲ್ಲರ ಕೇಂದ್ರಬಿಂದುವಾಗಿದೆ.
Mahatama Gandhi's Assasination
2020-21ನೇ ಸಾಲಿನ ಬಜೆಟ್ ಪುಸ್ತಕದ ಕವರ್ ಪೇಜ್ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಿಸಲಾಗಿದ್ದು, ಅದು ಎಲ್ಲರ ಗಮನ ಸೆಳೆದಿದೆ. ಈ ವಿಷಯವಾಗಿ ಮಾತನಾಡಿರುವ ಹಣಕಾಸು ಸಚಿವ ಥಾಮಸ್, ಖಂಡಿತವಾಗಿ ಇದು ರಾಜಕೀಯ ನಡೆ. ಬಜೆಟ್ ಪುಸ್ತಕದ ಮೇಲೆ ಪ್ರಕಟಗೊಂಡಿರುವ ಗಾಂಧಿ ಚಿತ್ರ ಮಲಯಾಳಂ ಚಿತ್ರಕಾರ ಬಿಡಿಸಿರುವ ಚಿತ್ರವಾಗಿದೆ.
ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಾಗಬೇಕು. ಹೀಗಾಗಿ ಈ ಚಿತ್ರವನ್ನ ನಾವು ಪ್ರಕಟಗೊಳ್ಳಿಸಿದ್ದೇವೆ ಎಂದು ಸಚಿವರು ಬಜೆಟ್ ಪುಸ್ತಕದ ಮೇಲೆ ಅಚ್ಚು ಹಾಕಿಸಿರುವ ಚಿತ್ರವನ್ನ ಸಮರ್ಥಿಸಿಕೊಂಡಿದ್ದಾರೆ.