ಕರ್ನಾಟಕ

karnataka

By

Published : Oct 3, 2019, 8:12 AM IST

Updated : Oct 3, 2019, 8:24 AM IST

ETV Bharat / bharat

ನದಿಗೆ ಉರುಳಿದ ಬಸ್​​: ಆರು ಸಾವು 19 ಮಂದಿಗೆ ಗಾಯ

ಮಧ್ಯಪ್ರದೇಶದಲ್ಲಿ ಬಸ್​ ನದಿಗೆ ಉರುಳಿ ಬಿದ್ದ ಪರಿಣಾಮ 6 ಜನ ಸಾವಿಗೀಡಾಗಿದ್ದು, 19 ಜನ ಗಂಭಿರವಾಗಿ ಗಾಯಗೊಂಡಿದ್ದಾರೆ.

ನದಿಗೆ ಉರುಳಿದ ಬಸ್

ಭೋಪಾಲ್​: ಮಧ್ಯಪ್ರದೇಶದಲ್ಲಿ ರಾಯ್​​ಸೇನ್​ ನದಿಗೆ ಬಸ್​ ಉರುಳಿದ ಪರಿಣಾಮ ಆರು ಜನ ಜಲ ಸಮಾಧಿಯಾಗಿದ್ದಾರೆ. ಸುಮಾರು 19 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ನದಿಗೆ ಉರುಳಿದ ಬಸ್​

ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಬಸ್​​ ರಾಯಸೇನ್​ದಿಂದ ಛಾತ್ರಪುರಕ್ಕೆ ಹೊರಟಿತ್ತು ಎನ್ನಲಾಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಸ್ಥಿತಿಯ ಪರಿಶೀಲನೆ ಕೈಗೊಂಡಿದ್ದಾರೆ.

ಬಸ್​​​ ನೀರಿನಲ್ಲಿ ಮುಳುಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂಬ ಮಾಹಿತಿ ಸಿಕ್ಕಿದೆ.

Last Updated : Oct 3, 2019, 8:24 AM IST

ABOUT THE AUTHOR

...view details