ಲೂಧಿಯಾನ್(ಪಂಜಾಬ್):ರಕ್ಕಸ ವೈರಸ್ ಕೊರೊನಾ ಯಾರಿಗೂ ಗೊತ್ತಾಗದಂತೆ ಜನಸಾಮಾನ್ಯರ ಜೀವ ಹಿಂಡುತ್ತಿದೆ. ಈ ಮಹಾಮಾರಿಯಿಂದ ಹೊರಬರಲು ದೇಶದ ಮೇಲೆ ಲಾಕ್ಡೌನ್ ಎಂಬ ಯುದ್ಧ ಸಾರಲಾಗಿದ್ದು, ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಜನರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕರ್ಫ್ಯೂ ಆಪತ್ತು: ಅಪಘಾತವಾದ್ರೂ ನೆರವಿಗೆ ಬಾರದ ಆ್ಯಂಬುಲೆನ್ಸ್, 12 ಕಿ.ಮೀ ಹೆಂಡ್ತಿ ಸೈಕಲ್ ಮೇಲೆ ಹೊತ್ತೊಯ್ದ ಗಂಡ! - ಆ್ಯಂಬುಲೆನ್ಸ್
ಕೊರೊನಾ ಮಹಾಮಾರಿಯಿಂದ ಹೊರಬರಲು ದೇಶದ ಮೇಲೆ ಲಾಕ್ಡೌನ್ ಎಂಬ ಅಸ್ತ್ರ ಬಳಕೆ ಮಾಡಲಾಗಿದ್ದು, ಇದರಲ್ಲಿ ಸಿಲುಕಿ ಜನಸಾಮಾನ್ಯರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.
![ಕರ್ಫ್ಯೂ ಆಪತ್ತು: ಅಪಘಾತವಾದ್ರೂ ನೆರವಿಗೆ ಬಾರದ ಆ್ಯಂಬುಲೆನ್ಸ್, 12 ಕಿ.ಮೀ ಹೆಂಡ್ತಿ ಸೈಕಲ್ ಮೇಲೆ ಹೊತ್ತೊಯ್ದ ಗಂಡ! A man carried his injured wife on a bicycle for 12 kilometers](https://etvbharatimages.akamaized.net/etvbharat/prod-images/768-512-6556167-thumbnail-3x2-wdfdf.jpg)
ಪಂಜಾಬ್ನ ಲೂಧಿಯಾನ್ದಲ್ಲಿನ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಕಾಲಿಗೆ ಗಂಭೀರ ಗಾಯವಾಗಿದೆ. ಆಕೆಯನ್ನ ಭಾರತ್ನಗರ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಗಾಯಗೊಂಡ ಕಾಲಿನ ಭಾಗಕ್ಕೆ ಚಿಕಿತ್ಸೆ ನೀಡುವ ಬದಲು ಎದೆ ಭಾಗದ ಎಕ್ಸ್-ರೇ ಮಾಡಿದ್ದಾರೆ. ಇದರಿಂದ ಬೇಸತ್ತು ಗಂಡ ದೇವದತ್ ಆಕೆಯನ್ನ ಭಾರತ್ನಗರದಿಂದ ಕಂಗನ್ವಾಲ್ಗೆ ಕರೆದುಕೊಂಡು ಬರಬೇಕಾಗಿತ್ತು. ಈ ವೇಳೆ ಆ್ಯಂಬುಲೆನ್ಸ್ನವರು 2 ಸಾವಿರ ರೂಪಾಯಿ ಹಣ ನೀಡುವಂತೆ ಕೇಳಿಕೊಂಡರು. ಅಷ್ಟೊಂದು ಹಣವಿಲ್ಲದ ಕಾರಣ ಸೈಕಲ್ ಮೇಲೆ ಕರೆದುಕೊಂಡು ಬಂದಿರುವೆ ಎಂದು ದೇವದತ್ ತನ್ನ ಕಣ್ಣೀರಿನ ಕಥೆ ಹೊರಹಾಕಿದ್ದಾನೆ. ಸುಮಾರು 12 ಕಿಲೋ ಮೀಟರ್ ಸೈಕಲ್ ಮೇಲೆ ಆಕೆಯನ್ನ ಕೂರಿಸಿಕೊಂಡು ಬಂದಿರುವೆ ಎಂದು ಆತ ಹೇಳಿದ್ದಾನೆ.
ದೇಶಾದ್ಯಂತ ಲಾಕ್ಡೌನ್ ಆದೇಶ ಇರುವುದರಿಂದ ಯಾವುದೇ ವಾಹನಗಳು ರೋಡ್ಗೆ ಇಳಿಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಆಂಬುಲೆನ್ಸ್ ಸಹಾಯ ಮಾಡದಿರುವುದು ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆತಗಿಸುವಂತಹದ್ದು ಎಂದರೆ ಸುಳ್ಳಲ್ಲ.