ಕರ್ನಾಟಕ

karnataka

ETV Bharat / bharat

ವಿವಾದಿತ ಹೇಳಿಕೆ ನೀಡಿದ ಕವಿ ಮುನಾವರ್​ ರಾಣಾ ವಿರುದ್ಧ ಪ್ರಕರಣ ದಾಖಲು

ಕವಿ ಮುನಾವರ್​ ರಾಣಾ ಸೋಷಿಯಲ್​ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

By

Published : Nov 2, 2020, 4:24 PM IST

Updated : Nov 2, 2020, 5:30 PM IST

Lucknow. Case filed against Munawar Rana in disputed statement case of France incident in Hazratganj
ಕವಿ ಮುನವಾರ್ ರಾಣಾ

ಲಖನೌ: ಫ್ರಾನ್ಸ್‌ನಲ್ಲಿ ನಡೆದ ದಾಳಿಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಕವಿ ಮುನಾವರ್​ ರಾಣಾ ಅವರ ವಿರುದ್ಧ ಇಲ್ಲಿನ ಹಜರತ್​ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕವಿ ಮುನಾವರ್​ ರಾಣಾ ಸೋಷಿಯಲ್​ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡಿದ್ದಾರೆ ಎಂದು ಇನ್ಸ್​ಪೆಕ್ಟರ್​​ ದೀಪಕ್ ಪಾಂಡೆ ಹೇಳಿಕೆ ಮೇರೆಗೆ ಹಜರತ್​ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫ್ರಾನ್ಸ್​ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದ್​ ಅವರ ಕಾರ್ಟೂನ್‌ಗಳನ್ನು ತೋರಿಸುವ ಮೂಲಕ ಅವರನ್ನು ಅವಹೇಳನೆ ಮಾಡಿದ್ದಾರೆ ಎಂದು ಆರೋಪಿಸಿ, ಶಾಲಾ ಶಿಕ್ಷಕರೊಬ್ಬರ ಹತ್ಯೆ ನಡೆದಿತ್ತು.

Last Updated : Nov 2, 2020, 5:30 PM IST

ABOUT THE AUTHOR

...view details