ಕರ್ನಾಟಕ

karnataka

ETV Bharat / bharat

ಕಿಸಾನ್​ ಸಮ್ಮಾನ್​ನಲ್ಲಿ ಗೂಗಲ್​ ಟ್ರಾನ್ಸ್​ಲೇಶನ್​ ತರಲೆ... ಬೆಸ್ಟ್​ ಆದ ಉತ್ತಮ್​, ಲಾರ್ಡ್​ ಆದ ಭಗವಾನ್​ - ಗೂಗಲ್​​ ಟ್ರಾನ್ಸ್​​ಲೇಶನ್ ನಿಂದ ರೈತರಿಗೆ ತೊಂದರೆ ಸುದ್ದಿ

ಗೂಗಲ್​​​ ಟ್ರಾನ್ಸ್​​ಲೇಶನ್​​ ಎಡವಟ್ಟಿನಿಂದಾಗಿ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​​ ಯೋಜನೆಯಲ್ಲಿ ಹೆಸರು ಬದಲಾಗಿ ಮಹಾರಾಷ್ಟ್ರದ ರೈತರು ತೊಂದರೆ ಅನುಭವಿಸುವಂತಾಗಿದೆ.

farmer
ಫಜೀತಿಗೆ ಸಿಲುಕಿದ ರೈತರು

By

Published : Jan 13, 2020, 11:49 PM IST

ಮಹಾರಾಷ್ಟ್ರ/ಸಾಂಘ್ವಿ:ಗೂಗಲ್​​​ ಟ್ರಾನ್ಸ್​​ಲೇಶನ್​​ ಯಡವಟ್ಟಿನಿಂದಾಗಿ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​​ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯಬೇಕಿದ್ದ ರೈತರು ಫಜೀತಿಗೆ ಸಿಲುಕುವಂತಾಗಿದೆ.

ಹೌದು ಮಹಾರಾಷ್ಟ್ರದ ಸಾಂಘ್ವಿ ಜಿಲ್ಲೆಯ ಕೆಲವು ರೈತರು ತಮ್ಮ ಹೆಸರನ್ನ ಕಿಸಾನ್​ ಪಿಎಂ ಯೋಜನೆಗೆ ಸೇರಿಸುವ ಸಮಯದಲ್ಲಿ ಮರಾಠಿಯಿಂದ ಇಂಗ್ಲಿಷ್​​ ಭಾಷೆಗೆ ಭಾಷಾಂತರಗೊಂಡ ಪರಿಣಾಮ, ಉತ್ತಮ್​​ ಎಂಬುವರ ಹೆಸರು 'ಬೆಸ್ಟ್'​​ ಎಂದಾಗಿದೆ. ಅದೇ ರೀತಿ ಸುತಾರ್​ ಎಂಬುವವರ ಹೆಸರು 'ಕಾರ್ಪೆಂಟರ್​' ಎಂದಾಗಿದೆ. ಅಷ್ಟೇ ಅಲ್ಲ ಭಗವಾನ್​ ಎಂಬ ಮತ್ತೊಬ್ಬ ರೈತನ ಹೆಸರು 'ಲಾರ್ಡ್'​​ ಎಂದಾಗಿದ್ದು, ಇದ್ರಿಂದ ಫಲಾನುಭವಿಗಳ ಖಾತೆಗೆ ಕೃಷಿ ಹಣ ಜಮೆಯಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ಯೋಜನೆಯ ಪ್ರಥಮ ಹಂತದಲ್ಲಿ ಹೆಸರು ನೋಂದಣಿ ವೇಳೆ ಈ ಪ್ರಮಾದ ಜರುಗಿದ್ದು, ಗೂಗಲ್​ ಅನುವಾದದಿಂದ ಈ ರೀತಿ ಹೆಸರುಗಳು ತಪ್ಪಾಗಿ ನಮೂದಾಗಿವೆ. ಯೋಜನೆಯ ಅರ್ಹ ಫಲಾನುಭವಿ ರೈತರ ಹೆಸರಿನ ಪಟ್ಟಿಯನ್ನು ಮರಾಠಿ ಭಾಷೆಯಲ್ಲಿ ತಯಾರಿಸಿ ಗ್ರಾಮಸೇವಕರು ಕಂದಾಯ ಇಲಾಖೆಗೆ ನೀಡಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳು ರೈತರ ಹೆಸರುಗಳ ಉದ್ದುದ್ದ ಇರುವ ಕಾರಣ ಗೂಗಲ್​​ ಟ್ರಾನ್ಸ್​​ಲೇಟರ್​​ ಮೊರೆ ಹೋಗಿದ್ದು, ಇದರಿಂದ ಈ ರೀತಿ ಹೆಸರುಗಳು ತಪ್ಪಾಗಿ ನಮೂದಾಗಿವೆ ಎಂದು ಸಾಂಘ್ವಿ ಜಿಲ್ಲೆಯ ಪಿಎಂ ಕಿಸಾನ್​​ ಯೋಜನೆಯ ಸಂಯೋಜಕರಾದ ಯಾಸಿನ್​​ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇದು ಸಂಪೂರ್ಣವಾಗಿ ಡಾಟಾ ಎಂಟ್ರಿಯಿಂದ ಉಂಟಾದ ಸಮಸ್ಯೆ ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಉಳಿದ ರೈತರಿಗೆ ಬ್ಯಾಂಕ್​​ ಖಾತೆ ಸಂಖ್ಯೆ ಮತ್ತು ಆಧಾರ್ ವಿವರಗಳನ್ನು ಬಳಸಿಕೊಂಡು ಹಣ ಜಮಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಉತ್ತಮ್​ ನನ್ನ ಹೆಸರು ಬೆಸ್ಟ್​ ಎಂದಾಗಿತ್ತು. ಹೀಗಾಗಿ ನನಗೆ ಹಣ ಪಡೆಯಲು ಸಾಧ್ಯವಾಗಿರಲಿಲ್ಲ, ಇನ್ನು ಈ ಘಟನೆ ಬೆಳಕಿಗೆ ಬಂದ ನಂತರ ಹೆಸರು ಸರಿಪಡಿಸಲಾಗಿದ್ದು, ನನ್ನ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಗೂಗಲ್​​ ಅನುವಾದದ ಎಡವಟ್ಟಿನಿಂದ ನಾಲ್ಕೈದು ಫಲಾನುಭವಿ ರೈತರು ಈ ರೀತಿ ಫಜೀತಿ ಪಡುವಂತಾಗಿದ್ದು, ತಾಂತ್ರಿಕತೆಯ ಪರಿಣಾಮ ಅನ್ನದಾತನನ್ನು ಕೂಡ ಸಂಕಷ್ಟಕ್ಕೆ ದೂಡಿದೆ.

ಇನ್ನು ಈ ಪಿಎಂ ಕಿಸಾನ್​​ ಯೋಜನೆಯನ್ನು ಸಣ್ಣ ರೈತರ ಅನುಕೂಲಕ್ಕಾಗಿ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು, 2000 ರೂ ನಂತೆ 3 ಕಂತುಗಳಲ್ಲಿ ಅರ್ಹ ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

For All Latest Updates

TAGGED:

ABOUT THE AUTHOR

...view details