ನವದೆಹಲಿ:ಹಲವು ವರ್ಷಗಳಿಂದ ಕಾಗದದ ಮೇಲೆಷ್ಟೇ ಉಳಿದಿದ್ದ ಲೋಕಪಾಲ್ ಸಂಸ್ಥೆಗೆ ಇದೀಗ ಜೀವ ಬಂದಿದೆ. ಭ್ರಷ್ಟರ ಬೇಟೆಗೆ ರಚಿಸಲಾದ ಶಕ್ತಿಯುತ ಸಂಸ್ಥೆಗೆ ಅಧಿಕೃತ ಚಾಲನೆ ಸಿಕ್ಕಿದೆ.
ಚುನಾವಣೆ ಹೊಸ್ತಿಲಲ್ಲೇ ಮೊದಲ ಲೋಕಪಾಲರಾಗಿ ಆಯ್ಕೆಯಾಗಿರುವ ನ್ಯಾ. ಪಿನಕಿ ಚಂದ್ರ ಘೋಷ್ ಅವರು ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಅಂತೆಯೆ, ಇಂದು ಲೋಕಪಾಲ್ ಸಂಸ್ಥೆಯ ಸದಸ್ಯರು ಪ್ರತಿಜ್ಞಾವಿಧಿ ಕೈಗೊಂಡು, ಅಧಿಕಾರ ವಹಿಸಿಕೊಂಡರು.
ವಿವಿಧ ಹೈಕೋರ್ಟ್ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದಿಲೀಪ್ ಬಿ ಭೋಸಲೆ, ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಶ ಕುಮಾರಿ ಹಾಗೂ ಅಜಯ್ ಕುಮಾರ್ ತ್ರಿಪಾಠಿ ನ್ಯಾಯಾಂಗೀಯ ಸದಸ್ಯರಾಗಿ ಅಧಿಕಾರ ವಹಿಸಿಕೊಂಡರು.
ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಾಜಿ ಐಆರ್ಎಸ್ ಅಧಿಕಾರಿ ಮಹೇಂದರ್ ಸಿಂಗ್ ಹಾಗೂ ಗುಜರಾತ್ನ ಮಾಜಿ ಐಎಎಸ್ ಅಧಿಕಾರಿ ಇಂದ್ರಜಿತ್ ಪ್ರಸಾದ್ ಗೌತಮ್ ಲೋಕಪಾಲ್ ಸಂಸ್ಥೆಯ ಇತರೆ ಸದಸ್ಯರಾಗಿ ಅಧಿಕಾರಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಮಾಜಿ ಸಿಎಂ ವೀರಭದ್ರ ಸಿಂಗ್, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಹಾಗೂ ಛತ್ತೀಸ್ಗಢದ ಸಚಿವ ಟಿಎಸ್ ಸಿಂಗ್ ಡಿಯೋ ಸೇರಿ ಹಿರಿಯ ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳು ಉಪಸ್ಥಿತಿರಿದ್ದರು.