ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಹರಡುವ ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಲೋಕಸಭೆಯಲ್ಲಿ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ.
ಮಾರ್ಚ್ 11ರ ಹೋಳಿ ಆಚರಣೆ ಬಳಿಕ ಲೋಕಸಭೆ ಕಲಾಪಗಳು ಪುನಾರಂಭವಾಗಲಿದ್ದು, ಸಂಸತ್ ಪ್ರವೇಶಿಸುವ ಸಂಸದರು ಹಾಗೂ ಸಂದರ್ಶಕರಿಗೆ ಈ ಕೆಳಗಿನ ಕೆಲವು ಸುರಕ್ಷತಾ ಸಲಹೆಗಳನ್ನು ಇಂದು ಲೋಕಸಭೆ ನೀಡಿದೆ.
1. ಉಸಿರಾಟ, ಕೈಗಳ ಶುಚಿತ್ವ ಸೇರಿದಂತೆ ಸಾಮಾನ್ಯ ನೈರ್ಮಲ್ಯದ ಕುರಿತು ಜಾಗೃತಿ ವಹಿಸಲು ಸೂಚನೆ
2. ಮುಂದಿನ ವಾರದಿಂದ ಸಂಸತ್ನ ಒಳಗೆ ಯಾವುದೇ ಸಂದರ್ಶಕರನ್ನು ಸಂಸದರು ಭೇಟಿ ಮಾಡುವಂತಿಲ್ಲ ಹಾಗೂ ವಿನಾಕಾರಣ ಅಥವಾ ಅನಧಿಕೃತ ಕಾರಣಗಳಿಗೆ ಸಂದರ್ಶಕರು ಲೋಕಸಭೆಯನ್ನ ಪ್ರವೇಶಿಸುವಂತಿಲ್ಲ.