ಕರ್ನಾಟಕ

karnataka

ETV Bharat / bharat

ಲಾಕ್‌ಡೌನ್ ಕಾರ್ಮಿಕ ವರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ: ಮಮತಾ ಕಳವಳ

ಈ ಕಠಿಣ ಸಮಯದಲ್ಲಿ ಎಲ್ಲರೂ "ನಮ್ಮ ಸಹೋದರ ಸಹೋದರಿಯರು ನಮ್ಮ ಜೊತೆ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕು" ಎಂದು ಮಮತಾ ಬ್ಯಾನರ್ಜಿ ಟ್ವೀಟ್​ ಮಾಡಿದ್ದಾರೆ.

By

Published : May 1, 2020, 7:40 PM IST

Lockdown has badly hit working class
ಮಮತಾ ಬ್ಯಾನರ್ಜಿ ಟ್ವೀಟ್​

ಕೋಲ್ಕತ್ತಾ :ಕೋವಿಡ್​​​ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಹೇರಿರುವ ಲಾಕ್‌ಡೌನ್ ಪ್ರಯೋಗ ಕಾರ್ಮಿಕ ವರ್ಗದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್​ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಎಲ್ಲ ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದರು ಮತ್ತು ಈ ಕಠಿಣ ಸಮಯದಲ್ಲಿ ಎಲ್ಲರೂ "ನಮ್ಮ ಸಹೋದರ ಸಹೋದರಿಯರು ನಮ್ಮ ಜೊತೆ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕು" ಎಂದು ಟ್ವೀಟ್​ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕಾರ್ಮಿಕರ ದಿನದಲ್ಲಿ, ಪ್ರಪಂಚದಾದ್ಯಂತದ ಎಲ್ಲಾ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಭಕ್ತಿಪೂರ್ವಕ ಶುಭಾಶಯಗಳು. ಲಾಲ್​ಡೌನ್​, ಕಾರ್ಮಿಕ ವರ್ಗದ ಮೇಲೆ ತೀವ್ರ ಪರಿಣಾಮ ಬೀರಿದೆ, ಎಂದ ಅವರು, ಲಾಕ್‌ಡೌನ್‌ನಿಂದ ತೀವ್ರವಾಗಿ ಹಾನಿಗೊಳಗಾದ ವಲಸೆ ಕಾರ್ಮಿಕರಿಗೆ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸಹಾಯ ಮಾಡಲು ತನ್ನ ಸರ್ಕಾರ ಘೋಷಿಸಿರುವ ಎರಡು ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.

"ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕ ವರ್ಗದ ಪರವಾಗಿ ನಿಲ್ಲಲು, ಬಂಗಾಳದಲ್ಲಿನ ನಮ್ಮ ಸರ್ಕಾರವು ಎರಡು ಹೊಸ ಯೋಜನೆಗಳನ್ನು ಘೋಷಿಸಿತು. - ವಲಸೆ ಕಾರ್ಮಿಕರಿಗೆ 'ಸ್ನೇಹರ್ ಪೊರೊಶ್' ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ 'ಪ್ರೊಕೆಸ್ಟಾ' ಎಂಬ ಹೆಸರಿನ ಯೋಜನೆಗಳಿವಾಗಿವೆ.

ABOUT THE AUTHOR

...view details