ಕರ್ನಾಟಕ

karnataka

ಸಿಡಿಲಬ್ಬರಕ್ಕೆ ಬಿಹಾರದಲ್ಲಿ ಮತ್ತೆ 12 ಬಲಿ: ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಣೆ

ಸಿಡಿಲು-ಮಿಂಚಿಗೆ ಬಿಹಾರ ತತ್ತರಿಸಿದೆ. ಬುಧವಾರ ಒಂದೇ ಮೃತಪಟ್ಟಿರುವ 12 ಜನರ ಕುಟುಂಬಕ್ಕೆ ಸಿಎಂ ನಿತೀಶ್​ ಕುಮಾರ್ ತಲಾ 4 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಜನರು ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

By

Published : Jul 9, 2020, 11:18 AM IST

Published : Jul 9, 2020, 11:18 AM IST

Lightning
ಸಿಡಿಲಿಗೆ ಬಿಹಾರದಲ್ಲಿ ಮತ್ತೆ 12 ಬಲಿ

ಬಿಹಾರ:ರಾಜ್ಯಾದ್ಯಂತ ಸಿಡಿಲಿನ ಅಬ್ಬರಕ್ಕೆ ಬುಧವಾರ ಒಂದೇ ದಿನ 12 ಜನರು ಬಲಿಯಾಗಿದ್ದು, ಮೃತರ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಬೆಗುಸರೈ, ಭಾಗಲ್ಪುರ್, ಬಂಕಾ, ಮುಂಗರ್, ಕೈಮೂರ್ ಮತ್ತು ಜಮುಯಿ - ಈ ಆರು ಜಿಲ್ಲೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಅಪಾಯಕಾರಿ ವಾತಾವರಣದಲ್ಲಿ ಜನರು ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆ. ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಸಲಹೆಗಳನ್ನು ಅನುಸರಿಸಿ ಮನೆಯೊಳಗೆ ಸುರಕ್ಷಿತವಾಗಿರಿ ಎಂದು ಸಿಎಂ ನಿತೀಶ್​ ಕುಮಾರ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಪಾಟ್ನಾ, ಭೋಜ್‌ಪುರ, ವೈಶಾಲಿ ಮತ್ತು ನಳಂದ ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಜುಲೈ 2 ರಂದು ಬಿಹಾರದಲ್ಲಿ ಸಿಡಿಲಿಗೆ 6 ಮಂದಿ, ಜು.3 ರಂದು 13 ಹಾಗೂ ಜು.4 ರಂದು 23 ಮಂದಿ ಮೃತಪಟ್ಟಿದ್ದರು.

ABOUT THE AUTHOR

...view details