ಸಾಹಿಬ್ಗಂಜ್(ಜಾರ್ಖಂಡ್): ಸೋಮವಾರ ರಾತ್ರಿ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ 20 ಯೋಧರು ಹುತಾತ್ಮರಾಗಿದ್ದಾರೆ. ಅದರಲ್ಲಿ ಜಾರ್ಖಂಡನ್ 26 ವರ್ಷದ ಯೋಧ ಕುಂದನ್ ಕುಮಾರ್ ಓಜಾ ಕೂಡ ಒಬ್ಬರು. ಕಳೆದ 17 ದಿನಗಳ ಹಿಂದೆ ತಂದೆಯಾಗಿದ್ದ ಇವರು ಪುಟ್ಟ ಮಗುವಿನ ಮುಖ ನೋಡದೇ ವೀರ ಮರಣವನ್ನಪ್ಪಿದ್ದಾರೆ.
ಬಿಹಾರ್ ರೆಜಿಮೆಂಟ್ನ ಕುಂದನ್ ಕುಮಾರ್ ಕೇವಲ 26 ವರ್ಷದ ಯೋಧ. ಇವರ ಪತ್ನಿ ನಮಿತಾ ದೇವಿ ಕಳೆದ 17 ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಮಾತನಾಡಿದ್ದ ಕುಂದನ್, ಆದಷ್ಟು ಬೇಗ ಮಗಳ ಮುಖ ನೋಡಲು ಊರಿಗೆ ಬರುವೆ ಎಂದು ಫೋನ್ನಲ್ಲಿ ಹೇಳಿದ್ದರು. ಆದರೆ ಅವರ ಇದೀಗ ದೇಶಕ್ಕಾಗಿ ವೀರ ಮರಣವನ್ನಪ್ಪಿದ್ದಾರೆ.