ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವ್ ತೀವ್ರ ಒತ್ತಡದಲ್ಲಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಪಾಕ್ ಗಿಳಿ ಪಾಠದಿಂದ ತೀವ್ರ ಒತ್ತಡದಲ್ಲಿ ಕುಲಭೂಷಣ್ ಜಾಧವ್.. ವಿದೇಶಾಂಗ ಇಲಾಖೆ - ವಿದೇಶಾಂಗ ಇಲಾಖೆ
ಪಾಕ್ ಹೇಳಿಕೊಡುತ್ತಿರುವ ಸುಳ್ಳು ಗಿಳಿ ಪಾಠವನ್ನ ಒಪ್ಪಲಾಗದೆ ಕುಲಭೂಷಣ್ ಜಾಧವ್ ತೀವ್ರ ಒತ್ತಡದಲ್ಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಕುಲಭೂಷಣ್ ಜಾಧವ್
ಪಾಕಿಸ್ತಾನದಲ್ಲಿರುವ ಭಾರತದ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಇಂದು ಕುಲಭೂಷಣ್ ಜಾಧವ್ ಅವರನ್ನ ಭೇಟಿ ಮಾಡಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.ಗೌರವ್ ಅಹ್ಲುವಾಲಿಯಾ ಭೇಟಿ ನಂತರ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ, ಪಾಕ್ ಹೇಳಿಕೊಡುತ್ತಿರುವ ಸುಳ್ಳು ಗಿಳಿ ಪಾಠವನ್ನ ಒಪ್ಪಲಾಗದೆ ಕುಲಭೂಷಣ್ ಜಾಧವ್ ತೀವ್ರ ಒತ್ತಡದಲ್ಲಿದ್ದಾರೆ. ಈ ಬಗ್ಗೆ ಸಮಗ್ರವಾದ ವರದಿಯನ್ನ ಪಡೆದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದಿದೆ.
ಇನ್ನು ವಿದೇಶಾಂಗ ಸಚಿವ ಜೈಶಂಕರ್, ಜಾಧವ್ ಅವರ ತಾಯಿಯೊಂದಿಗೆ ಮಾತನಾಡಿದ್ದಾರೆ. ಇಂದು ನಡೆದ ಚರ್ಚೆಯ ಬಗ್ಗೆ ಮಾಹಿತಿ ನೀಡಿದ್ದಾರೆ.