ಕರ್ನಾಟಕ

karnataka

ETV Bharat / bharat

ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆ ಬಲಿ

ತೆಲಂಗಾಣ ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆವೋರ್ವರು ಬಲಿಯಾಗಿದ್ದಾರೆ.

By

Published : Oct 21, 2019, 4:53 PM IST

ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆ ಬಲಿ

ಖಮ್ಮಂ: ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲಾ ನ್ಯಾಯಾಲಯದ ಎರಡನೇ ಹೆಚ್ಚುವರಿ ಪ್ರಥಮ ದರ್ಜೆ ಕೋರ್ಟ್​ನ ನ್ಯಾಯಾಧೀಶೆವೋರ್ವರು ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

45 ವರ್ಷದ ಎಂ. ಜಯಮ್ಮ ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ನ್ಯಾಯಾಧೀಶೆ. ನ್ಯಾ. ಜಯಮ್ಮ ಅವರು ಕಳೆದ 10 ದಿನಗಳಿಂದ ಸಿಕಂದರಾಬಾದ್​ನ ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.

ನ್ಯಾಯಾಧೀಶೆ ಜಯಮ್ಮ ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಜಯಮ್ಮ ನಿಧನಕ್ಕೆ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details