ತಿರುವನಂತಪುರ:ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮದರಸಾ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಸಿಹಿತಿಂಡಿ ಆಸೆ ತೋರಿಸಿ ಲೈಂಗಿಕ ಕಿರುಕುಳ: ಮದರಸಾ ಶಿಕ್ಷಕನಿಗೆ ಜೈಲುಶಿಕ್ಷೆ - undefined
ಕೊಟ್ಟಾಯಂ ಜಿಲ್ಲೆಯ ಮದರಸಾವೊಂದರ ಶಿಕ್ಷಕ ವಿ.ಎಂ.ಯೂಸುಫ್ನನ್ನು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.
![ಸಿಹಿತಿಂಡಿ ಆಸೆ ತೋರಿಸಿ ಲೈಂಗಿಕ ಕಿರುಕುಳ: ಮದರಸಾ ಶಿಕ್ಷಕನಿಗೆ ಜೈಲುಶಿಕ್ಷೆ](https://etvbharatimages.akamaized.net/etvbharat/prod-images/768-512-3452982-thumbnail-3x2-gggg.jpg)
ಕೊಟ್ಟಾಯಂ
ಕೊಟ್ಟಾಯಂ ಜಿಲ್ಲೆಯ ಮದರಸಾವೊಂದರ ಶಿಕ್ಷಕ ವಿ.ಎಂ. ಯೂಸುಫ್ (60) ಬಂಧಿತ ಶಿಕ್ಷಕ. ತಿಸ್ಸೂರಿನ ಕೊಡುಗಲ್ಲೂರಿನಲ್ಲಿ ಬಂಧಿಸಲಾದ ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ಬಂಧಿತ ಶಿಕ್ಷಕ ಯೂಸುಫ್
ಅಪ್ರಾಪ್ತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಸ್ವೀಟ್ ನೀಡುವುದಾಗಿ ಹೇಳಿ ಈ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.