ಕರ್ನಾಟಕ

karnataka

ETV Bharat / bharat

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ​: ಆರೋಪಿ ಶಿವಶಂಕರ್​ಗೆ ಜಾಮೀನು - Kerala gold smuggling case

ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಡಾಲರ್ ಕಳ್ಳಸಾಗಣೆ ಕೇಸ್​ನಲ್ಲಿ ಬಂಧಿತರಾಗಿದ್ದ ಎಂ.ಶಿವಶಂಕರ್​​ಗೆ ಜಾಮೀನು ಸಿಕ್ಕಿದೆ.

Kerala High Court grants bail to M Sivasankar in gold smuggling case
ಆರೋಪಿ ಶಿವಶಂಕರ್​ಗೆ ಜಾಮೀನು

By

Published : Jan 25, 2021, 2:29 PM IST

ಕೊಚ್ಚಿ:ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ​ ಐಎಎಸ್ ಮಾಜಿ​ ಅಧಿಕಾರಿ ಹಾಗೂ ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್​​ಗೆ ಕೇರಳ ಹೈಕೋರ್ಟ್​ ಜಾಮೀನು ನೀಡಿದೆ.

2019ರ ಜುಲೈನಲ್ಲಿ ಬೆಳಕಿಗೆ ಬಂದ ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ವೇಳೆ ಶಿವಶಂಕರ್ ಅವರು 1.30 ಕೋಟಿ ರೂ. ಮೌಲ್ಯದ ಡಾಲರ್​​ಗಳನ್ನು​ ಕಳ್ಳಸಾಗಣೆ ಮಾಡಿರುವುದು ತಿಳಿದು ಬಂದಿತ್ತು. ಈ ಸಂಬಂಧ ಶಿವಶಂಕರ್ ವಿರುದ್ಧ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್​​) ಕೇಸ್​ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿತ್ತು.

ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದಿತ್ತು ಸಂಘರ್ಷ: ಸ್ಫೋಟಕ ಮಾಹಿತಿ ಬಹಿರಂಗ

ಭ್ರಷ್ಟಾಚಾರ ಸೇರಿದಂತೆ ಇತರ ಕ್ರಿಮಿನಲ್​ ಆರೋಪಗಳು ನಾಗರಿಕ ಸೇವಾ ಅಧಿಕಾರಿಗಳ ಮೇಲಿದ್ದರೂ ಸಹ ಕೇಂದ್ರ ತನಿಖಾ ಸಂಸ್ಥೆಯಿಂದ ಬಂಧನಕ್ಕೊಳಗಾದ ಕೇರಳದ ಮೊದಲ ಐಎಎಸ್ ಅಧಿಕಾರಿ ಎಂ. ಶಿವಶಂಕರ್​ ಆಗಿದ್ದಾರೆ. ಇದೀಗ ಇವರಿಗೆ ಕೇರಳ ಹೈಕೋರ್ಟ್ ಬೇಲ್​ ನೀಡಿದೆ.

ABOUT THE AUTHOR

...view details