ಕರ್ನಾಟಕ

karnataka

ETV Bharat / bharat

ಅಧಿಕಾರ ಸ್ವೀಕರಿಸಿ 2 ತಿಂಗಳ ಬಳಿಕ ಸಂಪುಟ ವಿಸ್ತರಣೆ ಮಾಡಿದ ಕೆಸಿಆರ್​

ಸಚಿವ ಸಂಪುಟ ವಿಸರ್ಜಿಸಿ ನಿಗದಿಗಿಂತ ಮೊದಲೇ ಚುನಾವಣೆಗೆ ಹೋಗಿ ಭರ್ಜರಿ ವಿಜಯ ಸಾಧಿಸಿದ್ದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಇದೀಗ ಸಂಪುಟ ವಿಸ್ತರಣೆ ಮಾಡಿದ್ದಾರೆ.

By

Published : Feb 19, 2019, 1:45 PM IST

Updated : Feb 19, 2019, 1:53 PM IST

ಸಂಪುಟ ವಿಸ್ತರಣೆ ಮಾಡಿದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್

ಹೈದರಾಬಾದ್​: ಎಂಟು ತಿಂಗಳು ಮೊದಲೇ ಸಚಿವ ಸಂಪುಟ ವಿಸರ್ಜಿಸಿ ನಿಗದಿಗಿಂತ ಮೊದಲೇ ಚುನಾವಣೆಗೆ ಹೋಗಿ ಭರ್ಜರಿ ವಿಜಯ ಸಾಧಿಸಿದ್ದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​, ತಾವು ಅಧಿಕಾರ ಸ್ವೀಕರಿಸಿದ ಸ್ವೀಕರಿಸಿದ ಎರಡು ತಿಂಗಳ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದಾರೆ.

ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 10 ನೂತನ ಸಚಿವರಿಗೆ ರಾಜ್ಯಪಾಲ ಈ ಎಸ್​​ ಎಲ್​ ನರಸಿಂಹನ್​ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು. ವಿಶೇಷ ಎಂದರೆ ಪ್ರಮಾಣ ವಚನ ಸ್ವೀಕರಿಸಿದ 10 ಸಚಿವರಲ್ಲಿ ಹಲವು ಮೊದಲ ಬಾರಿಗೆ ಸಚಿವಗಿರಿ ಅದೃಷ್ಟ ಪಡೆದಿದ್ದಾರೆ.

ಇನ್ನು ಈ ಸಚಿವ ಸಂಪುಟ ವಿಸ್ತರಣೆಯಿಂದ ಕೆಸಿಆರ್​ ಕ್ಯಾಬಿನೆಟ್​ ಬಲ 12ಕ್ಕೆ ಏರಿಕೆಯಾಗಿದೆ. ತೆಲಂಗಾಣ ಸಚಿವ ಸಂಪುಟದ ಒಟ್ಟು ಬಲ 18. ಇನ್ನೂ 6 ಸಚಿವ ಸ್ಥಾನಗಳು ಖಾಲಿ ಇದ್ದು, ಶೀಘ್ರವೇ ಆ ಸ್ಥಾನಗಳನ್ನ ತುಂಬುವ ಸಾಧ್ಯತೆಗಳಿವೆ.

ಸಂಪುಟ ವಿಸ್ತರಣೆ ಮಾಡಿದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್
ಇಂದ್ರಕರಣ್​ ರೆಡ್ಡಿ, ತಲಾಸನಿ ಶ್ರೀನಿವಾಸ್​ ಯಾದವ್​, ಜಗದೀಶ್​ ರೆಡ್ಡಿ, ಈಟೆಲಾ ರಾಜೇಂಧರ್​, ಪುತ್ರ ಕೆಟಿಆರ್​ ಸಹ ಪ್ರಮಾಣ ವಚನ ಸ್ಪೀಕರಿಸಿದ್ದಾರೆ.
ಹೊಸ ಮುಖಗಳು:

ಮೆಡ್ಚಲ್​ ಎಂಎಲ್​ಎ ಮಲ್ಲಾ ರೆಡ್ಡಿ, ಮಹಬೂಬ್​ ನಗರ ಶಾಸಕ ವಿ ಶ್ರೀನಿವಾಸ್​ ಗೌಡ್​, ವನಪರ್ತಿ ಎಂಎಲ್​ಎ ಸಿಂಗಿರ್​​ರೆಡ್ಡಿ ನಿರಂಜನ್​ ರೆಡ್ಡಿ, ಪಾಲಕುರ್ತಿ ಶಾಸಕ ಎರ್​​ಬೆಲಿ ದಯಾಕರ್​ ರಾವ್​, ಬಲಕೊಂಡ ಎಂಎಲ್​ಎ ವೆಮುಲಾ ಪ್ರಶಾಂತ್​ ರೆಡ್ಡಿ, ಧರ್ಮಪುರಿ ಎಂಎಲ್​ಎ ಕೊಪ್ಪುಲ ಈಶ್ವರ್​ ಇದೇ ಮೊದಲ ಬಾರಿಗೆ ಸಚಿವಗಿರಿ ಪಡೆದ ಶಾಸಕರಾಗಿದ್ದಾರೆ.

Last Updated : Feb 19, 2019, 1:53 PM IST

ABOUT THE AUTHOR

...view details