ಕರ್ನಾಟಕ

karnataka

By

Published : Dec 11, 2019, 5:24 PM IST

ETV Bharat / bharat

ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆಗೆ ಯತ್ನಿಸಿದ ರೀತಿಯಿದೆ ಕೇಂದ್ರದ ನಿರ್ಧಾರ: ಕಮಲ್‌ ಹಾಸನ್‌

ಕೇಂದ್ರ ಸರ್ಕಾರ ದೇಶವ್ಯಾಪಿ ಜಾರಿಗೆ ತರಲು ನಿರ್ಧರಿಸಿರುವ 'ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ' ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

Kamal Haasan
ನಟ ಕಮಲ್​ ಹಾಸನ್​​

ಚೆನ್ನೈ(ತಮಿಳುನಾಡು): ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪರ-ವಿರೋಧ ಪ್ರತಿಕ್ರಿಯೆ, ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ದಕ್ಷಿಣ ಭಾರತದ ಮೇರು ನಟ ಕಮಲ್​ ಹಾಸನ್ ಕೇಂದ್ರ ಸರ್ಕಾರದ ವಿರುದ್ಧ​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಮಸೂದೆಯನ್ನು ಟೀಕಿಸಿದ ಅವರು, ಇದು ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ ರೀತಿಯಲ್ಲಿದೆ ಎಂದು ಕಿಡಿ ಕಾರಿದ್ದಾರೆ.

ನಟ ಹಾಗು ಮಕ್ಕಳ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್ ಪ್ರತಿಕ್ರಿಯಿಸಿ, ಇದೊಂದು ಮೂರ್ಖತನದ ನಿರ್ಧಾರ. ಯಂಗ್​ ಇಂಡಿಯಾ ಆದಷ್ಟು ಬೇಗ ಈ ನಿರ್ಧಾರ ​ತಿರಸ್ಕರಿಸಲಿದೆ. ನಿಮ್ಮ ಹಳೇ ಯೋಜನೆ ಇಲ್ಲಿ ಕಾರ್ಯರೂಪಕ್ಕೆ ತರಲು ಇದು ಪ್ರಾಚೀನ ಭಾರತವಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಅವುಗಳನ್ನ ತಿದ್ದುಪಡಿ ಮೂಲಕ ಸರಿ ಮಾಡಬಹುದು. ಆದರೆ ಇಷ್ಟೊಂದು ದೊಡ್ಡಮಟ್ಟದ ಮಸೂದೆ ತಿದ್ದುಪಡಿ ಮಾಡುತ್ತಿರುವುದು ನಿಜಕ್ಕೂ ವಿಷಾದದ ವಿಚಾರ. ಈ ಕ್ರಮ ತೆಗೆದುಕೊಳ್ಳುವುದರಿಂದ ಕೇಂದ್ರ ಸರ್ಕಾರ ಅತಿದೊಡ್ಡ ಅಪರಾಧ ಎಸಗುತ್ತಿದೆ ಎಂದು ಟೀಕಿಸಿದ್ದಾರೆ.

ABOUT THE AUTHOR

...view details