ಕರ್ನಾಟಕ

karnataka

ಸಾವು ಹತ್ತಿರದಲ್ಲೇ ಇತ್ತು, ಸ್ವಲ್ಪದರಲ್ಲೇ ಬಚಾವ್​ ಆದೆ: ನಟ ಕಮಲ್​ ಹಾಸನ್​

By

Published : Feb 20, 2020, 1:30 PM IST

Updated : Feb 20, 2020, 2:02 PM IST

'ಇಂಡಿಯನ್ 2' ಚಿತ್ರದ ಸೆಟ್​ನಲ್ಲಿ ಸಂಭವಿಸಿದ ಕ್ರೇನ್ ಅಪಘಾತದಲ್ಲಿ ಮೂವರು ಮೃತಪಟ್ಟ ಹಿನ್ನೆಲೆ ನಟ ಕಮಲ್ ಹಾಸನ್ ಹಾಗೂ ಪ್ರೋಡಕ್ಷನ್ ಹೌಸ್ ಲೈಕಾದಿಂದ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ದುರ್ಘಟನೆಯಿಂದ ತಾವು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ.

kamal-haasan
ನಟ ಕಮಲ್​ ಹಾಸನ್​

ತಮಿಳುನಾಡು:'ಇಂಡಿಯನ್ 2' ಚಿತ್ರದ ಸೆಟ್​ನಲ್ಲಿ ಸಂಭವಿಸಿದ ಕ್ರೇನ್ ಅಪಘಾತದಲ್ಲಿ ಮೂವರು ಮೃತಪಟ್ಟ ಹಿನ್ನೆಲೆ ನಟ ಕಮಲ್ ಹಾಸನ್ ಹಾಗೂ ಪ್ರೋಡಕ್ಷನ್ ಹೌಸ್ ಲೈಕಾದಿಂದ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ದುರ್ಘಟನೆಯಿಂದ ತಾವು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ.

ಮೂವರು ಅತ್ಯಂತ ಶ್ರಮಶೀಲ ತಂತ್ರಜ್ಞರ ಸಾವಿನ ಕುರಿತು ಟ್ವೀಟ್​ ಮಾಡಿರುವ ನಟ ಕಮಲ್​ ಹಾಸನ್​, ನಾನು ಜೀವನದಲ್ಲಿ ಇಂತಹ ಸಾಕಷ್ಟು ಅಪಘಾತಗಳನ್ನು ಎದುರಿಸಿದ್ದೇನೆ. ಆದ್ರೆ ಇದು ಅತ್ಯಂತ ಭಯಾನಕವಾಗಿತ್ತು ಹಾಗೂ ನನ್ನ ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ನೋವಿಗಿಂತ ಹೆಚ್ಚಾಗಿ, ಅವರನ್ನು ಕಳೆದುಕೊಂಡ ಕುಟುಂಬದ ದುಃಖವು ಅನೇಕ ಪಟ್ಟು ಹೆಚ್ಚಿದೆ ಹಾಗಾಗಿ ಅವರಲ್ಲಿ ಒಬ್ಬನಾಗಿ ಅವರ ದುಃಖದಲ್ಲಿ ನಾನು ಭಾಗವಹಿಸುತ್ತೇನೆ ಎಂದಿದ್ದಾರೆ.

ನಿನ್ನೆ ಇಂಡಿಯನ್​​ 2 ಸೆಟ್‌ಗಳಲ್ಲಿ ಸಂಭವಿಸಿದ ದುರದೃಷ್ಟಕರ ಅಪಘಾತದಿಂದ ನಾವು ತುಂಬಾ ದುಃಖಿತರಾಗಿದ್ದೇವೆ" "ನಾವು ನಮ್ಮ ಮೂರು ಶ್ರಮಶೀಲ ತಂತ್ರಜ್ಞರನ್ನು ಕಳೆದುಕೊಂಡಿದ್ದೇವೆ ಎಂದು ಲೈಕಾ ಪ್ರೋಡಕ್ಷನ್​​ ದುಃಖವನ್ನು ವ್ಯಕ್ತಪಡಿಸಿದೆ.

ಈ ಭೀಕರ ಅಪಘಾತದಲ್ಲಿ ಕೇವಲ 10 ಸೆಕೆಂಡುಗಳ ಅಂತರದಲ್ಲಿ ಕಮಲ್ ಹಾಸನ್ ಸರ್, ಕಾಜಲ್ ಹಾಗೂ ನಾನು ಪರಾರಿಯಾದೇವು ಎಂದು ವಸ್ತ್ರ ವಿನ್ಯಾಸಕಿ ಅಮೃತಾರಾಂ ಅವರು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

ನಜ್ರತ್​​ಪೇಟ್ ಉಪನಗರದಲ್ಲಿ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿದ್ದ ಇಂಡಿಯನ್​​ 2 ಸಿನೆಮಾದ ಶೂಟಿಂಗ್​​​ ವೇಳೆ ಈ ದುರಂತ ಸಂಭವಿಸಿದ್ದು, ಈ ವೇಳೇ 3 ಮಂದಿ ಮೃತಪಟ್ಟಿದ್ದು, ಸುಮಾರು 9 ಜನರು ಗಾಯಗೊಂಡಿದ್ದಾರೆ.

Last Updated : Feb 20, 2020, 2:02 PM IST

For All Latest Updates

ABOUT THE AUTHOR

...view details