ಕರ್ನಾಟಕ

karnataka

ETV Bharat / bharat

ಕೋವಿಡ್​​ ಪರಿಣಾಮ: ಪೂರ್ಣ ಪ್ರಮಾಣದ ಸಾಮಾಜಿಕ ಬಿಕ್ಕಟ್ಟಿನತ್ತ ಉದ್ಯೋಗ ಕೊರತೆ - Unemployment in OECD countries

ಆರ್ಥಿಕತೆಯಲ್ಲಿ ಸುದೀರ್ಘ ಕುಸಿತ ಮತ್ತು ಕನಿಷ್ಠ ಕಾರ್ಮಿಕ ಮಾರುಕಟ್ಟೆಯ ನಿರೀಕ್ಷೆಗಳು ಪ್ರಸ್ತುತ ಉದ್ಯೋಗ ಬಿಕ್ಕಟ್ಟನ್ನು ಸಾಮಾಜಿಕ ಬಿಕ್ಕಟ್ಟಾಗಿ ಪರಿವರ್ತಿಸುತ್ತಿವೆ. ಕಡಿಮೆ ಆದಾಯದಲ್ಲಿರುವ ಮಹಿಳೆಯರು, ಯುವಕರು ಮತ್ತು ಕಾರ್ಮಿಕರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ.

Job crisis following pandemic could soon turn into a social crisis
ಉದ್ಯೋಗ ಬಿಕ್ಕಟ್ಟು

By

Published : Jul 9, 2020, 1:13 PM IST

ಹೈದರಾಬಾದ್​​:ಭಾರತದಲ್ಲಿ ಕೊರೊನಾ ವೈರಸ್​​ ಕಾಣಿಸಿಕೊಂಡ ಬಳಿಕ ಲಾಕ್​​ಡೌನ್​ ಹೇರಿದ್ದೇ ತಡ ಆರ್ಥಿಕತೆ ಮೇಲೆ ಅತ್ಯಂಕ ಕೆಟ್ಟ ಪರಿಣಾಮ ಬೀರಿತು. ಅದರ ನೇರ ಪರಿಣಾಮ ಬೀರಿದ್ದು, ನಿರುದ್ಯೋಗ ಮತ್ತು ಬಡತನದ ಮೇಲೆ. 11 ಕೋಟಿ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆಗ ಕೆಲ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಬೆಳಕಿಗೆ ಬಂದಿತ್ತು.

ಕೋವಿಡ್​​​-19 ತಂದಿಟ್ಟ ಸಮಸ್ಯೆಯಿಂದಾಗಿ ಈಗಾಗಲೇ ವಲಸಿಗರ ಪಾಡು ಹೇಳತೀರದಾಗಿದೆ. ಸರ್ಕಾರದ ಒಂದು ಕಣ್ಣಾಗಿ ಆರ್ಥಿಕ ಕ್ಷೇತ್ರವನ್ನು ಬದಲು ಮಾಡುತ್ತಿದ್ದ ಅವರು, ಪ್ರಸ್ತುತ ತಮ್ಮ ಬದುಕಿನ ಯಂತ್ರವನ್ನು ತಿರುಗಿಸಲು ನಾನಾ ರೀತಿಯಲ್ಲಿ ಕಷ್ಟಪಡುತ್ತಿದ್ದಾರೆ. ವೈರಸ್ ಎಂದು​ ನಿಯಂತ್ರಣಕ್ಕೆ ಬರುತ್ತದೋ? ನಮ್ಮ ಜೀವನ ಸಹಜ ಸ್ಥಿತಿಗೆ ಎಂದು ಮರಳುತ್ತದೋ ಎಂಬ ಚಿಂತೆಯಲ್ಲೇ ಉಪವಾಸದ ದಿನಗಳನ್ನು ದೂಡುತ್ತಿದ್ದಾರೆ.

ಈಗ ಮತ್ತೊಂದು ಆತಂಕಕಾಗಿ ಅಂಶ ಬೆಳಕಿಗೆ ಬೆಂದಿದ್ದು, ಉದ್ಯೋಗದಲ್ಲಿ ಅಭೂತಪೂರ್ವ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಅದು ಕೂಡ 2008ಕ್ಕೆ ಹೋಲಿಸಿದರೆ ತೀರಾ ಕೆಟ್ಟದ್ದಾಗಿದೆ. ಅದರಲ್ಲಿ ಕಡಿಮೆ ಆದಾಯ ಪಡೆಯುತ್ತಿದ್ದ ಮಹಿಳೆಯರು, ಯುವಕರು ಮತ್ತು ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಡತನದ ದರ ಹೆಚ್ಚಾಗಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯು (ಒಇಸಿಡಿ) ತನ್ನ ವರದಿಯಲ್ಲಿ ತಿಳಿಸಿದೆ.

ಏಪ್ರಿಲ್​​​ನಲ್ಲಿ ನಿರುದ್ಯೋಗದ ಪ್ರಮಾಣದಲ್ಲಿ ಅಭೂತಪೂರ್ವವಾಗಿ ಶೇ.3 ಪಾಯಿಂಟ್​​​​ ಏರಿಕೆ ಕಂಡಿತು. ಒಇಸಿಡಿ ನಿರುದ್ಯೋಗ ದರವು 2020ರ ಮೇ ಅಂತ್ಯಕ್ಕೆ ಶೇ 8.4ಕ್ಕೆ ಇಳಿಮುಖ ಕಂಡಿದೆ. ಏಪ್ರಿಲ್​​​​ನಲ್ಲಿ​ ಏರಿಕೆಯ ನಂತರ ಅದು ಶೇ8.5ಕ್ಕೆ ಬಂದು ನಿಂತಿದೆ. ಇದು ದಶಕದ ಅತಿ ಹೆಚ್ಚು ನಿರೋದ್ಯೋಗ ದರ ಇದಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಅದು 5.2% ರಷ್ಟಿತ್ತು.

ಒಇಸಿಡಿ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಮೇ ತಿಂಗಳಲ್ಲಿ 54.5 ಮಿಲಿಯನ್ ಆಗಿತ್ತು. ಏಪ್ರಿಲ್ ಮತ್ತು ಮೇ ನಡುವಿನ ವ್ಯತ್ಯಾಸದ ಕೊರತೆಯು ವ್ಯತಿರಿಕ್ತ ಪ್ರವೃತ್ತಿಗಳ ಮೇಲೆ ಪರಿಣಾಮ ಬೀರಿದೆ. ಸದ್ಯ ಅಮೆರಿಕದಲ್ಲಿ ಸಹಜ ಸ್ಥಿತಿಗೆ ಮರಳಲು ಆರ್ಥಿಕ ಕ್ಷೇತ್ರಕ್ಕೆ ಚಾಲನೆ ನೀಡಲಾಗಿದೆ. ಆದರೆ, ಲಕ್ಷಗಟ್ಟಲೆ ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈಗದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಸಾಮಾನ್ಯವಾಗಿದೆ.

ಭಾರತದಲ್ಲಿ ನಿರುದ್ಯೋಗ ಪ್ರಮಾಣ ಕುಸಿಯುವ ಆಶಾವಾದಿ ಹೊಂದಿದೆ. ಅದು ಆಶಾವಾದಿಯಾಗಿಯೇ ಉಳಿಯಲಿದೆ. ಆದರೆ, ಆರ್ಥಿಕತೆಯ ಮಹಾ ಶಿಖರಗಳನ್ನು ಕುಸಿಯಲಿದ್ದು, ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿರುದ್ಯೋಗ ದರ ಶೇ.9.4ರಷ್ಟಕ್ಕೆ ತಲುಪುವ ಸಾಧ್ಯತೆ ಇದೆ. 2021ರ ಅಂತ್ಯದ ವೇಳೆಗೆ ಕೆಲಸದಲ್ಲಿರುವ ಬಹುಪಾಲು ಜನರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗುವ ನಿರೀಕ್ಷೆಯಿದೆ ಎಂದು ಒಇಸಿಡಿ ಆತಂಕ ವ್ಯಕ್ತಪಡಿಸಿದೆ.

2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಆರಂಭವಾದ ಮೊದಲ ಮೂರು ತಿಂಗಳಿಗೆ ಹೋಲಿಸಿದರೆ ಪ್ರಸ್ತುತ ಬಿಕ್ಕಟ್ಟಿನ ಮೊದಲ ಮೂರು ತಿಂಗಳಲ್ಲಿ ಹತ್ತು ಪಟ್ಟು ಕುಸಿದಿದೆ ಎಂದು ಒಇಸಿಡಿ ದೇಶಗಳ ಡೇಟಾ ತಿಳಿಸಿದೆ. ಆರ್ಥಿಕ ವ್ಯವಸ್ಥೆ ಮತ್ತು ಉದ್ಯೋಗದಲ್ಲಿ ಚೇತರಿಕೆ ಕಾಣಲು ಈಚೆಗೆ ನಡೆದ ಉದ್ಯೋಗ ನೀತಿಗಳ ಕುರಿತು ವಿಶೇಷ ಒಇಸಿಡಿ ಸಭೆಯ ನಡೆಯಿತು.

ಒಇಸಿಡಿ ಪ್ರಧಾನ ಕಾರ್ಯದರ್ಶಿ ಏಂಜಲ್ ಗುರ್ರಿಯಾ ಸಭೆಯಲ್ಲಿ ಹೀಗೆ ಹೇಳಿದರು. ದೇಶಗಳಲ್ಲಿಉದ್ಯೋಗ ಬಿಕ್ಕಟ್ಟು ಪೂರ್ಣ ಪ್ರಮಾಣದ ಸಾಮಾಜಿಕ ಬಿಕ್ಕಟ್ಟಾಗಿಬದಲಾಗುವುದನ್ನು ತಪ್ಪಿಸಲು ಕೋವಿಡ್​​-19 ಬಿಕ್ಕಟ್ಟಿಗೆ ತ್ವರಿತ ಮತ್ತು ನಿರ್ಣಾಯಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಿ. ಸುದೀರ್ಘ ಕುಸಿತದ ಅಪಾಯದ ಹಾದಿಯನ್ನು ಕಡಿಮೆಗೊಳಿಸಲು ಮತ್ತು ಕಾರ್ಮಿಕ ಮಾರುಕಟ್ಟೆಯ ಭವಿಷ್ಯವು ಬಾಳಿಕೆ ಬರುವ ಹಾಗೆ ಸ್ಥೂಲ ಆರ್ಥಿಕ ನೀತಿಗಳು ಬೆಂಬಲವಾಗಿರಬೇಕು. ಉದ್ಯೋಗ ಕಳೆದುಕೊಳ್ಳುತ್ತಿರುವ ಯುವಕರಿಗೆ, ಆಶಾವಾದ ಮೂಡಿಸುವಂತಾಗಬೇಕು ಎಂದು ಹೇಳಿದರು.

ಪುರುಷರಿಗಿಂತ ಮಹಿಳೆಯರೇ ಹೆಚ್ಚು ತೊಂದರೆಯಾಗಲಿದೆ. ಅನೇಕರು ಹೆಚ್ಚು ಪೀಡಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಸಮರ್ಪಕ ಉದ್ಯೋಗಗಳನ್ನು ಹೊಂದಿದ್ದಾರೆ. ತಾತ್ಕಾಲಿಕ ಅಥವಾ ಅರೆಕಾಲಿಕ ಒಪ್ಪಂದಗಳಲ್ಲಿ ಕೆಲಸ ಮಾಡುತ್ತಿರುವ ವಿಶೇಷವಾಗಿ ಉದ್ಯೋಗ ಮತ್ತು ಆದಾಯ ನಷ್ಟಗಳಿಗೆ ಒಡ್ಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ವಾಸ್ತವದಲ್ಲಿ ಆರ್ಥಿಕತೆ ಪುನಃಶ್ಚೇತನ ಮತ್ತು ಉದ್ಯೋಗ ಪ್ರಮಾಣ ಹೆಚ್ಚಿಸಲು ಹಲವು ರೀತಿಯ ಯೋಜನೆಗಳನ್ನು ರೂಪಿಸಬೇಕು. ಇಲ್ಲವಾದಲ್ಲಿ ಪೂರ್ಣ ಪ್ರಮಾಣದ ಸಾಮಾಜಿಕ ಬಿಕ್ಕಟ್ಟಾಗಿ ಪರಿವರ್ತನೆಯಾಗಲಿದೆ ಎಂದರು.

ABOUT THE AUTHOR

...view details