ನವದೆಹಲಿ:ಜೆಎನ್ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ, ಗುಂಪೊಂದು ಹಲ್ಲೆ ನಡೆಸಿದ್ದು, ದೇಶಾದ್ಯಂತ ಈ ಕೃತ್ಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇಂದು ಜೆಎನ್ಯು ಉಪ ಕುಲಪತಿ ಜಗದೀಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಇಂದು ಈ ಬಗ್ಗೆ ಚರ್ಚೆ ನಡೆಸಿದರು.
ಜೆಎನ್ಯು ಗಲಭೆಗೆ ಇವರೇ ಕಾರಣವಂತೆ... ಕುಲಪತಿ ಹೇಳೋ ಆ ಕಾರಣ ಏನು? - ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ
ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಹಿನ್ನೆಲೆ, ಉಪಕುಲಪತಿ ಜಗದೀಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ್ದು, ಹೊರಗಿನಿಂದ ಬಂದವರು ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜೆಎನ್ಯು ವಿಶ್ವದ್ಯಾಲಯದ ಆವರಣದಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಜಗದೀಶ್ ಕುಮಾರ್ ಸಮಾಲೋಚನೆ ನಡೆಸಿದ್ದು, ವಿವಿ ಆವರಣದೊಳಗಿನ ವಿದ್ಯಾರ್ಥಿಗಳ ಸಮಸ್ಯೆ, ಗಲಭೆಗೆ ಕಾರಣವಾದ ಅಂಶಗಳು ಹಾಗೂ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ವಿದ್ಯಾರ್ಥಿಗಳು ಸಹ ಉಪ ಕುಲಪತಿಗಳಿಗೆ, ವಿದ್ಯಾರ್ಥಿ ನಿಲಯ ಹಾಗೂ ವಿವಿ ಒಳಗಿನ ಭಾಗದಲ್ಲಿ ನಡೆಯುವ ಘಟನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಇನ್ನು ಈ ಸಭೆಯ ನಂತರ ಉಪಕುಲಪತಿ ಜಗದೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ಕಾನೂನು ಬಾಹಿರವಾಗಿ ಹೊರಗಿನವರು ನಮ್ಮ ವಿದ್ಯಾರ್ಥಿಗಳೊಂದಿಗೆ ತಂಗುತ್ತಿದ್ದು, ಅವರು ಸಹ ಈ ಘರ್ಷಣೆಗಳಲ್ಲಿ ಭಾಗಿಯಾಗಿ ವಿವಿಯಲ್ಲಿ ಹಿಂಸಾಚಾರ ಉಂಟಾಗಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಇಲ್ಲಿ ಏನಾದರೇನು, ಅವರಿಗೆ ಏನು ಸಮಸ್ಯೆಯಿಲ್ಲ. ಇಲ್ಲಿ ನಡೆದ ಹಲವಾರು ಕೃತ್ಯಗಳಿಗೆ ಇಂಥವರೇ ಕಾರಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.