ಕರ್ನಾಟಕ

karnataka

ETV Bharat / bharat

ನಾಮಪತ್ರ ತಿರಸ್ಕಾರ ವಿಚಾರ: ಸುಪ್ರೀಂ ಕದ ತಟ್ಟಿದ  ಮಾಜಿ ಸೈನಿಕ - undefined

ನಾಮಪತ್ರ ತಿರಸ್ಕೃತ ಆದೇಶ ಪ್ರಶ್ನಿಸಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಯೋಧ ತೇಜ್​ ಬಹುದ್ದೂರ್​ ಯಾದವ್​ ಸುಪ್ರೀಂಕೋರ್ಟ್​ ಮೊರೆಹೊಗಿದ್ದಾರೆ.

ಬಿಎಸ್​ಎಫ್ ಮಾಜಿ​ ಯೋಧನ ನಾಮಪತ್ರ ತಿರಸ್ಕೃತ ಹಿನ್ನೆಲೆ: ಸುಪ್ರೀಂ ಕದ ತಟ್ಟಿದ ಸೈನಿಕ

By

Published : May 6, 2019, 1:34 PM IST

ನವದೆಹಲಿ:ಉತ್ತರಪ್ರದೇಶದ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡಿದ್ದ ಮಾಜಿ ಯೋಧ ತೇಜ್​ ಬಹುದ್ದೂರ್​ ಯಾದವ್​ ನಾಮಪತ್ರ ತಿರಸ್ಕೃತಗೊಂಡಿದ್ದು, ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ಮಾಜಿ ಯೋಧ ತೇಜ್​ ಬಹುದ್ದೂರ್​ ಯಾದವ್​ ಪರ ವಕೀಲ ಪ್ರಶಂತ್​ ಯಾದವ್​ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಲಿದ್ದಾರೆ.

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ತೇಜ್​ ಬಹುದ್ದೂರ್​ ಯಾದವ್​ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವರ ನಾಮಪತ್ರ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿ, ನಾಮಪತ್ರ ವಜಾಗೊಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ತೇಜ್​ ಬಹುದ್ದೂರ್​, ಅವರು ಕೇಳಿರುವ ಎಲ್ಲ ದಾಖಲೆಗಳನ್ನ ನಾನು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಕೆ ಮಾಡಿರುವೆ. ಆದರೆ, ಯಾವುದೇ ಕಾರಣವಿಲ್ಲದೇ ಅವರು ನನ್ನ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ ಎಂದಿದ್ದರು.

2017ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯೋಧರಿಗೆ ನೀಡುವ ಕಳಪೆ ಆಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರನ್ನ ಸೇನೆಯಿಂದ ವಜಾಗೊಳಿಸಲಾಗಿತ್ತು.

For All Latest Updates

TAGGED:

ABOUT THE AUTHOR

...view details