ಪುಣೆ: ಇಷ್ಟು ದಿನ ಗಡಿಯಿಂದ ದಾಟಿ ಬಂದು ಭಾರತದೊಳಗೆ ದಾಳಿ ನಡೆಸುತ್ತಿದ್ದ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ ಇದೀಗ ಸಮುದ್ರದ ಮೂಲಕ ಭಾರತದೊಳಗೆ ಎಂಟ್ರಿ ನೀಡಿ ದಾಳಿ ನಡೆಸಲು ಮುಂದಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ನೌಕಾಪಡೆಗೆ ಸಿಕ್ಕಿದೆ.
ಇದೇ ವಿಷಯವಾಗಿ ಮಾತನಾಡಿರುವ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್, ಜೈಷ್-ಇ-ಮೊಹಮ್ಮದ್ ಉಗ್ರರಿಗೆ ಅಂಡರ್ವಾಟರ್ ಅಟ್ಯಾಕ್ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಅವರು ಭಾರತದೊಳಗೆ ನುಗ್ಗಿ ದಾಳಿ ಮಾಡುವ ಸಾಧ್ಯತೆ ಇದೆ. ಆದರೆ ಯಾವುದೇ ರೀತಿಯಲ್ಲೂ ಅವರು ಸಮುದ್ರ ದಾಟಿ ಭಾರತದೊಳಗೆ ಬರದಂತೆ ನಮ್ಮ ಯೋಧರು ಸನ್ನದ್ಧರಾಗಿದ್ದಾರೆ ಎಂದರು.