ಗೋವಾ:ಕರ್ನಾಟಕದಲ್ಲಿ ರಾಜೀನಾಮ ಪರ್ವ ಮುಂದುವರಿದಿದ್ದರೆ ಅತ್ತ ಗೋವಾದಲ್ಲಿ ಕಾಂಗ್ರೆಸ್ ಪಕ್ಷದ 3ನೇ 2ರಷ್ಟು ಶಾಸಕರು ಬಿಜೆಪಿ ಸೇರಿ ಕಾಂಗ್ರೆಸ್ ನೆಲ ಕಚ್ಚುವಂತೆ ಮಾಡಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಬಿಜೆಪಿ ಸೇರಿದ 10 ಕಾಂಗ್ರೆಸ್ ಎಂಎಲ್ಎ ಗಳಿಗಾಗಿ ಸಚಿವರನ್ನು ಕೈ ಬಿಡುವ ನಿರ್ಧಾರವನ್ನ ಕೈಗೊಂಡಿಲ್ಲ. ಆ ಬಗ್ಗೆ ಸದ್ಯಕ್ಕೆ ಯೋಚಿಸಿಯೂ ಇಲ್ಲ ಎಂದಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.
TAGGED:
CM Pramod Sawant