ಕರ್ನಾಟಕ

karnataka

ETV Bharat / bharat

8 ತಿಂಗಳ ಮಗು ಮನೆಯಲ್ಲಿಯೇ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ದಂಪತಿ - ಭಾವನಗರ್ ವೈದ್ಯ ದಂಪತಿ

ಕೊರೊನಾ ವೈರಸ್​​ ನಿರ್ಮೂಲನೆಗಾಗಿ ಹಗಿಲಿರುಳೆನ್ನದೇ ಕೊರೊನಾ ವಾರಿಯರ್ಸ್​ಗಳಾಗಿ ವೈದ್ಯರು, ಪೊಲೀಸ್​ ಹಾಗೂ ಇನ್ನಿತರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಗುಜರಾತ್​ನ ವೈದ್ಯ ದಂಪತಿ ತಮ್ಮ ಎಂಟು ತಿಂಗಳ ಮಗುವನ್ನೂ ಸಹ ಮನೆಯಲ್ಲಿಯೇ ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

corona warrior
ಕೊರೊನಾ ವಿರುದ್ದದ ಹೋರಾಟದಲ್ಲಿ ತೊಡಗಿರುವ ವೈದ್ಯ ದಂಪತಿ

By

Published : May 27, 2020, 10:27 PM IST

ಭಾವನಗರ್(ಗುಜರಾತ್​):ಕೊರೊನಾ ವಾರಿಯರ್ಸ್​ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ತಮ್ಮ ವೈಯಕ್ತಿಕ ನೋವು ನಲಿವುಗಳನ್ನು ಬದಿಗಿಟ್ಟು ಸಮಾಜದ ಇತರ ಜನರ ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ, ಗುಜರಾತ್​​ನ ಭಾವನಗರ್​​ನ ದಂಪತಿಗಳಿಬ್ಬರು ವೈದ್ಯರಾಗಿದ್ದು, ತಮ್ಮ ಎಂಟು ತಿಂಗಳ ಮಗುವನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ತಮ್ಮ ಕಾಯಕಕ್ಕೆ ಹಾಜರಾಗುತ್ತಿದ್ದಾರೆ.

ಡಾ.ಜಯೇಶ್​​ಬಾಯ್​​ ವಕಾನಿ ಭಾವನಗರದ ಸಿಹೋರ್‌ನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಹಾಗೂ ಸಿಹೋರ್ ತಾಲೂಕಿನ ಆರೋಗ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇವರ ಪತ್ನಿ ಪನಾರಾ ವಕಾನಿ ಸಹ ಭಾವನಗರದ ಕನಬಿವಾಡ್ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಎಂಟು ತಿಂಗಳ ಮಗುವನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ಬೆಳಗ್ಗೆಯಿಂದ ಸಂಜೆಯವರೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಕೊರೊನಾ ವಿರುದ್ದದ ಹೋರಾಟದಲ್ಲಿ ತೊಡಗಿರುವ ವೈದ್ಯ ದಂಪತಿ

ಈ ಇಬ್ಬರು ದಂಪತಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಈಗಾಗಲೇ 18 ಕೊರೊನಾ ವೈರಸ್​ ಪ್ರಕರಣಗಳು ದಾಖಲಾಗಿವೆ. ಆದರೆ ಈ ದಂಪತಿಗಳು ಮಾತ್ರ ಚಿಕ್ಕ ಮಗುವಿದ್ದರೂ ಸಹ ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿರುವುದರಿಂದ ಸಾರ್ವಜನಿಕರು ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ವೈದ್ಯ ದಂಪತಿಗಳಿಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ಕರ್ತವ್ಯ ನಿಭಾಯಿಸುವ ಮೂಲಕ ಸಮಾಜಕ್ಕೆ ಒಂದು ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಂತಾಗಿದೆ. ಕೆಲವು ಸಂದರ್ಭಗಳಲ್ಲಿ ನಮ್ಮ ಮಗಳ ಬಗ್ಗೆ ಚಿಂತೆ ಮೂಡುವುದು ಸಹಜ. ಆದರೆ, ಕರ್ತವ್ಯ ನಿರ್ವಹಿಸುವುದರಲ್ಲಿ ಲೋಪವೆಸಗುವುದು ನಮ್ಮ ವೃತ್ತಿ ಧರ್ಮ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details