ಕರ್ನಾಟಕ

karnataka

By

Published : Sep 22, 2019, 1:14 PM IST

ETV Bharat / bharat

ಚರಂಡಿ ಬಗೆದಂತೆಲ್ಲ ಶಿಶುಗಳ ಮೃತದೇಹಗಳು ಪತ್ತೆ... ಬೆಚ್ಚಿಬಿದ್ದ ನಗರ!

ಮಹಬೂಬ್​ನಗರ ಜಿಲ್ಲೆಯಲ್ಲಿ ಬಾಲನಗರದಲ್ಲಿ ಬೆಚ್ಚಿಬೀಳಿಸುವಂತ ಘಟನೆಯೊಂದು ಬೆಳಕಿಗೆ ಬಂದಿದೆ. ನಗರ ನೈರ್ಮಲ್ಯ ಕಾರ್ಯಕ್ರಮದ ವೇಳೆ ಚರಂಡಿ ಬಗೆದಂತೆಲ್ಲ ನವಜಾತು ಶಿಶುಗಳ ಮೃತದೇಹಗಳು ಪತ್ತೆಯಾಗಿದ್ದು, ಇದರಿಂದ ತೆಲಂಗಾಣದ ಜನತೆ ಆತಂಕಗೊಂಡಿದ್ದಾರೆ.

ಚರಂಡಿ ಬಗೆದಂತೆಲ್ಲ ಶಿಶುಗಳ ಮೃತ ದೇಹಗಳು ಪತ್ತೆ

ಮಹಬೂಬ್​ನಗರ್(ತೆಲಂಗಾಣ)​:ಬಾಲನಗರ ತಾಲೂಕು ಕೇಂದ್ರದಲ್ಲಿ 30 ದಿನಗಳ ಕಾಲ ನೈರ್ಮಲ್ಯ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ಚರಂಡಿಯಲ್ಲಿರುವ ಕಸ ಬಗೆದಂತೆಲ್ಲ ನವಜಾತ ಶಿಶುಗಳ ಕಳೆಬರಹಗಳು ದೊರೆತಿದ್ದು, ಇದು ತೆಲಂಗಾಣ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಇಲ್ಲಿನ ತಹಶಿಲ್ದಾರ್​ ಕಾರ್ಯಾಲಯಕ್ಕೆ ತೆರಳುವ ಮಾರ್ಗ ಮಧ್ಯೆ ಚರಂಡಿವೊಂದಿದೆ. ಕಳೆದ ಆರು ತಿಂಗಳಿನಿಂದ ಆ ಚರಂಡಿಯ ಸ್ವಚ್ಛತೆ ಕೈಗೊಂಡಿರಲಿಲ್ಲ. ಶನಿವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿಯಿಂದ ಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಬಗೆದಂತೆಲ್ಲ ಕಸದ ಜೊತೆ ಸುಮಾರು 10 ನವಜಾತು ಶಿಶುಗಳ ಕಳೆಬರಹಗಳು ದೊರೆತಿವೆ.

‘ಮಹಬೂಬ್​ನಗರ್ ಜಿಲ್ಲೆಯ ಬಾಲನಗರ್​ ತಾಲೂಕಿನಲ್ಲಿ ತಾಂಡಗಳು ಹೆಚ್ಚಾಗಿವೆ. ಆದ್ರೆ ಸುತ್ತಮುತ್ತ ಹಳ್ಳಿ ಮತ್ತು ತಾಂಡಗಳಲ್ಲಿ ಸ್ಕ್ಯಾನಿಂಗ್​ ಕೇಂದ್ರಗಳು ಇಲ್ಲ. ಬೇರೆ ಪ್ರದೇಶಕ್ಕೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಾರೆ. ಹೆಣ್ಣು ಶಿಶುವಾದಲ್ಲಿ ಬಾಲನಗರ್​ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಆಶ್ರಯ ಪಡೆದು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಇವರಲ್ಲದೇ ಪ್ರೇಮದ ಪ್ರೀತಿ-ಪ್ರೇಮದ ಸುಳಿಯಲ್ಲಿ ಸಿಲುಕಿ ಮೋಸ ಹೋದವರು ಸಹ ಗರ್ಭಪಾತ ಮಾಡಿಸಿರಬಹುದು. ಈ ಹಿಂದೆ ಬಾಲನಗರ್​ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಗರ್ಭಪಾತ ನಡೆಯುತ್ತಿದೆ ಎಂದು ಕೆಲ ಸಂಘಟನೆಯವರು ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದರು. ಈಗ ದೊರೆತಿರುವ ನವಜಾತು ಶಿಶುಗಳ ಕಳೆಬರಹಕ್ಕೂ ಮತ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಗರ್ಭಪಾತಕ್ಕೂ ಸಂಬಂಧವಿದೆಯಾ ಎಂಬುದನ್ನು ತಿಳಿಯಬೇಕಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಿಎಂಪಿ, ಮೆಡಿಕಲ್​ ಶಾಪ್​, ಖಾಸಗಿ ಆಸ್ಪತ್ರೆ ವೈದ್ಯರಿಗೆ ನೋಟಿಸ್​ ನೀಡುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ತುಳಸಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details