ಕರ್ನಾಟಕ

karnataka

ಮೂರೂ ಸೇನೆಯ ಸಮನ್ವಯದ ಸಂಕೇತ: ಸಿಡಿಎಸ್​ ರಾವತ್ ಧರಿಸುವ ಸಮವಸ್ತ್ರದ ವಿಶೇಷತೆ!

ಒಬ್ಬ ವ್ಯಕ್ತಿ ಅಥವಾ ಅಧಿಕಾರಿ ಧರಿಸುವ ಉಡುಪು ಅವರ ಸ್ಥಾನವನ್ನು ಹೇಳುತ್ತದೆ. ಅದರಂತೆ ಭಾರತದ ಮೊದಲ ಸಿಡಿಎಸ್ ಬಿಪಿನ್ ರಾವತ್​ ಧರಿಸುವ ಉಡುಪು ಮತ್ತು ಬಳಸುವ ಲಾಂಛನ ಅವರ ಸ್ಥಾನ ಮತ್ತು ಕೆಲಸದ ಪ್ರತಿಬಿಂಬವಾಗಿದೆ.

By

Published : Jan 2, 2020, 2:05 PM IST

Published : Jan 2, 2020, 2:05 PM IST

India's first CDS to wear Aemy uniform,ರಾವತ್ ಧರಿಸುವ ಸಮವಸ್ತ್ರದ ವಿಶೇಷತೆ
ರಾವತ್ ಧರಿಸುವ ಸಮವಸ್ತ್ರದ ವಿಶೇಷತೆ

ನವದೆಹಲಿ: ಭಾರತದ ಮೊದಲ ಸಿಡಿಎಸ್ ಅಗಿ ನೇಮಕಗೊಂಡಿರುವ ಜನರಲ್ ಬಿಪಿನ್ ರಾವತ್​ ಅವರ ಉಡುಗೆ ವಿಶೇಷವಾಗಿದೆ. ಮೂರೂ ಸೇನೆಗೆ ಮುಖ್ಯಸ್ಥರಾದ ಅವರ ಸಮವಸ್ತ್ರ ಮತ್ತು ಧರಿಸುವ ಬ್ಯಾಡ್ಜ್​ಗಳು ಸಾಕಷ್ಟು ವಿಶೇಷತೆಯಿಂದ ಕೂಡಿದೆ.

ಜನರಲ್ ಬಿಪಿನ್ ರಾವತ್ ಅವರು ತೊಡುವ ಕೆಲಸದ ಸಮವಸ್ತ್ರವು ಪ್ರಾಥಮಿಕವಾಗಿ ಜಂಟಿ, ಏಕೀಕರಣ ಮತ್ತು ಸಹಕಾರದ ಗುಣಗಳನ್ನ ಉದ್ದೇಶಿಸಿದ್ದು ಈ ಗುಣಗಳನ್ನೆ ಬ್ಯಾಡ್ಜ್‌ಗಳು ಪ್ರತಿಬಿಂಬಿಸುತ್ತವೆ.

ಸಿಡಿಎಸ್​ ಧರಿಸುವ ಟೋಪಿ

ಸಿಡಿಎಸ್​ ಬಿಪಿನ್ ರಾವತ್ ಬಳಸುವ ಲಾಂಛನ ಮೂರೂ ಸೇನೆಯಲ್ಲಿ ಬಳಸುವ ಚಿಹ್ನೆಗಳನ್ನ ಒಗ್ಗೂಡಿಸಿ ಮಾಡಲಾಗಿದೆ. ಮೂರು ತಲೆಯ ಸಿಂಹಗಳನ್ನು ಹೊಂದಿರುವ ರಾಷ್ಟ್ರೀಯ ಲಾಂಛನ ಕತ್ತಿಗಳ (ಭೂಸೇನೆ) ಮೇಲೆ ಕುಳಿತಿದೆ. ಹಾರುವ ಹದ್ದು(ಪಾಯುಪಡೆ), ಆ್ಯಂಕರ್(ನೌಕಾಪಡೆ) ಈ ಎಲ್ಲಾ ಚಿಹ್ನೆಗಳನ್ನ ಬಳಸಿ ಬ್ಯಾಡ್ಜ್​​ ಮಾಡಲಾಗಿದೆ. ಇದು ರಾವತ್​ ಧರಿಸುವ ಅಂಗಿಯ ಗುಂಡಿ, ಬೆಲ್ಟ್​​ ಬಕಲ್, ಭುಜದಲ್ಲಿರುವ ಬ್ಯಾಡ್ಜ್​​ ಮತ್ತು ಅವರು ಬಳಸುವ ಕಾರಿನ ಮೇಲೂ ಈ ಲಾಂಛನ ಇರಲಿದೆ.

ನವದೆಹಲಿಯ ದಕ್ಷಿಣ ಬ್ಲಾಕ್​ನಲ್ಲಿರುವ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಸಿಡಿಎಸ್​ ಬಿಪಿನ್​ ರಾವತ್​ 13 ಲಕ್ಷ ಭಾರತೀಯ ಪ್ರಬಲ ಸೈನ್ಯವನ್ನ ಪ್ರತಿನಿಧಿಸುವ ಸಮವಸ್ತ್ರವನ್ನು ಧರಿಸುತ್ತಾರೆ. ಇದು ವಿಶ್ವದ ಎರಡನೇ ಅತಿದೊಡ್ಡ ಸೇನೆಯಾಗಿದ್ದು, ಭಾರತೀಯ ನೌಕಾಪಡೆಯು ಸುಮಾರು 56,000 ಸಿಬ್ಬಂದಿ ಹೊಂದಿದ್ದರೆ, ಭಾರತೀಯ ವಾಯುಪಡೆಯು ಸುಮಾರು 1 ಲಕ್ಷದ 40 ಸಾವಿರ ಸಿಬ್ಬಂದಿ ಹೊಂದಿದೆ.

ಸಿಡಿಎಸ್​ ಬೆಲ್ಟ್​ನಲ್ಲಿ ಬಳಸುವ ಬಕಲ್

ಸರ್ಕಾರಕ್ಕೆ ಏಕರೂಪದ ಸೇನಾ ಸಲಹೆ ನೀಡಲು ಅನುಕೂಲವಾಗುವಂತೆ ಮೂರೂ ಸೇನೆಗೆ ಮುಖ್ಯಸ್ಥರಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ನೇಮಕ ಮಾಡುವ ತೀರ್ಮಾನಕ್ಕೆ ಭಾರತ ಸರ್ಕಾರ ಮನಸ್ಸು ಮಾಡಿತ್ತು. ಅದರ ಫಲಿತಾಂಶವಾಗಿ ಇದೀಗ ರಾವತ್ ಮೊದಲ ಸಿಡಿಎಸ್​ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿಡಿಎಸ್​ ಸಮವಸ್ತ್ರದಲ್ಲಿ ಭುಜದ ಮೇಲಿರುವ ಬ್ಯಾಡ್ಜ್​​

ಈ ಹುದ್ದೆ ಸೃಷ್ಟಿಸಲು ಇತಿಹಾಸದಲ್ಲಿ ಹಲವು ಘಟನೆಗಳು ಪ್ರೇರಣೆಯಾಗಿವೆ. 1971ರ ಬಾಂಗ್ಲಾ ದೇಶ ವಿಮೋಚನಾ ಯುದ್ಧ ಇದುವರೆಗಿನ ಭಾರತದ ಅತ್ಯಂತ ನಿರ್ಣಾಯಕ ಮಿಲಿಟರಿ ವಿಜಯ. ಮೂರು ಪಡೆಗಳ ಸಮನ್ವಯದ ಫಲಿತಾಂಶಕ್ಕೆ ಈ ವಿಜಯ ಸ್ಪಷ್ಟ ಉದಾಹರಣೆಯಾಗಿದೆ.

ಸಿಡಿಎಸ್​ ಸಮವಸ್ತ್ರದ ಗುಂಡಿಗಳು

ನಿವೃತ್ತ ಏರ್ ಚೀಫ್ ಮಾರ್ಷಲ್ ಪಿಸಿ ಲಾಲ್ 'ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಮೂರು ಸೇನೆಗಳು ಒಟ್ಟಿಗೆ ಕಾರ್ಯ ನಿರ್ವಹಿಸುವುದು ಅಗತ್ಯವೆಂದು ತೋರಿಸಿಕೊಟ್ಟಿದೆ. ಅಂತರ್ ಸೇನೆಗಳ ಸಹಕಾರ ಆ ಯುದ್ಧದ ಪ್ರಮುಖ ಪಾಠವಾಗಿತ್ತು' ಎಂದಿದ್ದಾರೆ.

ಸಿಡಿಎಸ್​ ಕಾರಿನಲ್ಲಿ ಬಳಸುವ ಬಾವುಟ

2017 ರಲ್ಲಿ ಭಾರತೀಯ ಜಂಟಿ ಮಿಲಿಟರಿ ಸಿದ್ಧಾಂತದ ದಾಖಲೆಯ ಮುನ್ನುಡಿಯಲ್ಲಿ, ಆಗಿನ ಸಿಬ್ಬಂದಿ ಸಮಿತಿಯ ಅಧ್ಯಕ್ಷ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲನ್ಬಾ ಅವರು ಹೀಗೆ ಹೇಳಿದ್ದಾರೆ, 'ವೇಗವಾಗಿ ಬದಲಾಗುತ್ತಿರುವ ಸಂಘರ್ಷದ ಸ್ವರೂಪವು ನಿರಂತರವಾಗಿ ಹೊಸ ಸವಾಲುಗಳನ್ನು ಒಡ್ಡುತ್ತದೆ. ಹೀಗಾಗಿ ಭಾರತೀಯ ಸೇನೆ ಪ್ರಸ್ತುತತೆ, ಚುರುಕು ಬುದ್ಧಿ, ಪರಿಣಾಮಕಾರಿಯಾಗಿ ಇರಬೇಕಾದರೆ ಉತ್ತಮವಾದದ್ದನ್ನು ಅಳವಡಿಸಿಕೊಳ್ಳಬೇಕು' ಎಂದಿದ್ದಾರೆ. ಈ ಎಲ್ಲಾ ಅಂಶಗಳು ಸಂಘಟಿತ ಕಾರ್ಯಾಚರಣೆಯ ಯೋಜನೆ ಮತ್ತು ಮೂರು ಸೇನೆಯಲ್ಲಿನ ಕೆಲವು ಸಾಮಾನ್ಯ ಕಾರ್ಯಗಳಲ್ಲಿ ನಿಯಂತ್ರಣವನ್ನು ಹೊಂದುವ ಅಗತ್ಯವನ್ನು ಹೇಳಿವೆ.

ಹೀಗಾಗಿ ಯಾವುದೇ ಅನುಮಾನವಿಲ್ಲದೆ ಭಾರತದ ಮೊದಲ ಸಿಡಿಎಸ್​ ಈ ಎಲ್ಲಾ ಗುರಿಗಳನ್ನ ಸಾಧಿಸುವತ್ತ ಕೆಲಸ ಮಾಡಲಿದ್ದಾರೆ.

- ಸಂಜೀಬ್ ಕೆಆರ್ ಬರುವಾ

ABOUT THE AUTHOR

...view details