ಕರ್ನಾಟಕ

karnataka

ETV Bharat / bharat

ಶೀಘ್ರದಲ್ಲೇ ತೈವಾನ್‌ಗೆ ಭಾರತದ ನೂತನ ರಾಜತಾಂತ್ರಿಕ ಪ್ರತಿನಿಧಿ - ತೈವಾನ್‌ಗೆ ಹೊಸ ಪ್ರತಿನಿಧಿಯನ್ನು ಪ್ರಕಟಿಸಲಿರುವ ಭಾರತ

ಭಾರತವು ತೈವಾನ್‌ನೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಮತ್ತು ಏಕ-ಚೀನಾ ನೀತಿ ಬೆಂಬಲಿಸುತ್ತದೆ. ಗೌರಂಗಲಾಲ್ ಅವರು ಶ್ರೀಧರನ್ ಮಧುಸೂಧನ್ ಅವರ ಸ್ಥಾನದಲ್ಲಿರುತ್ತಾರೆ.

ತೈವಾನ್‌ಗೆ ಹೊಸ ಪ್ರತಿನಿಧಿ
ತೈವಾನ್‌ಗೆ ಹೊಸ ಪ್ರತಿನಿಧಿ

By

Published : Jul 12, 2020, 10:05 PM IST

ನವದೆಹಲಿ: ಭಾರತ ಶೀಘ್ರದಲ್ಲೇ ಹಿರಿಯ ರಾಜತಾಂತ್ರಿಕ ಗೌರಂಗಲಾಲ್ ದಾಸ್ ಅವರನ್ನು ತೈವಾನ್‌ಗೆ ಸ್ಥಳಾಂತರಿಸಲಿದೆ. ದಾಸ್ ಪ್ರಸ್ತುತ ವಿದೇಶಾಂಗ ಸಚಿವಾಲಯದಲ್ಲಿ ಅಮೆರಿಕ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೌರಂಗಲಾಲ್ ದಾಸ್ ಅವರು ತೈಪೆಯ ಭಾರತದ ಪ್ರತಿನಿಧಿ ಕಚೇರಿಯ ಹೊಸ ತೈಪೆ ಅಸೋಸಿಯೇಷನ್‌ನ ನೂತನ ಮಹಾನಿರ್ದೇಶಕರಾಗಲಿದ್ದಾರೆ. ಈ ಹಿಂದೆ ಗೌರಂಗಲಾಲ್ ಅವರು ವಾಷಿಂಗ್ಟನ್‌ನ ಬೀಜಿಂಗ್‌ನಲ್ಲಿ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಚೇರಿಯಲ್ಲೂ ಸಹ ಸೇವೆ ಸಲ್ಲಿಸಿದ್ದರು.

ಭಾರತವು ತೈವಾನ್‌ನೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಮತ್ತು ಏಕ-ಚೀನಾ ನೀತಿ ಬೆಂಬಲಿಸುತ್ತದೆ. ಗೌರಂಗಲಾಲ್ ಅವರು ಶ್ರೀಧರನ್ ಮಧುಸೂಧನ್ ಅವರ ಸ್ಥಾನದಲ್ಲಿರುತ್ತಾರೆ. ಭಾರತದ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಏಳು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದ ಟಿಯೆನ್ ಚುಂಗ್-ಕ್ವಾಂಗ್ ಅವರ ಸ್ಥಾನಕ್ಕೆ, ತೈವಾನ್ ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ವ್ಯವಹಾರಗಳ ಮಹಾನಿರ್ದೇಶಕ ಬೌಶುವಾನ್ ಗೆರ್ ಅವರನ್ನು ಭಾರತದ ತೈವಾನ್‌ನ ಪ್ರತಿನಿಧಿಯಾಗಿ ಹೆಸರಿಸಲಾಗಿದೆ.

ABOUT THE AUTHOR

...view details