ವಯನಾಡ್(ಕೇರಳ): 'ಭಾರತ ಜಗತ್ತಿನ ಅತ್ಯಾಚಾರಗಳ ರಾಜಧಾನಿ' ಎನಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಯನಾಡ್ನಲ್ಲಿ ಮಾತನಾಡಿದ ಅವರು, ತನ್ನ ದೇಶದ ಸಹೋದರಿಯರು ಹಾಗೂ ಪುತ್ರಿಯರನ್ನು ರಕ್ಷಿಸುವತ್ತ ಭಾರತ ಯಾಕೆ ಗಮನ ಹರಿಸುತ್ತಿಲ್ಲ ಎಂದು ವಿದೇಶಗಳು ಪ್ರಶ್ನಿಸುತ್ತಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಬಗ್ಗೆ ನರೇಂದ್ರ ಮೋದಿ ಮಾತ್ರ ಒಂದು ಮಾತೂ ಆಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.