ವಿದ್ಯಾರ್ಥಿ ಜೀವನದಲ್ಲಿ ಓದಲೇಬೇಕು... ಈಗ ಪಡೆಯೋ ಶಿಕ್ಷಣವೇ ಮುಂದಿನ ಜೀವನದ ಮಾರ್ಗದರ್ಶಿ. ಅಂದ ಹಾಗೆ ಓದದೆಯೇ ಅಡ್ಡದಾರಿ ಹಿಡಿದು ಉತ್ತಮ ಸ್ಥಾನಕ್ಕೆ ಬರಬೇಕು ಎನ್ನುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಎಸ್ಎಸ್ಎಲ್ಸಿಯಿಂದ ಹಿಡಿದು ಪಿಹೆಚ್ಡಿವರೆಗೂ ಯಾವುದೇ ಪ್ರಮಾಣ ಪತ್ರವನ್ನ ಈಗ ದುಡ್ಡಿದ್ದರೆ ಸುಲಭವಾಗಿ ಪಡೆಯಲೇಬೇಕು. ಶಿಕ್ಷಣ ಎನ್ನುವುದು ಈಗ ಮಾರುಕಟ್ಟೆಯ ಸರಕು ಎಂಬಂತಾಗಿದೆ.
ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ಓದುವುದು. ಶೇ.100ರಷ್ಟು ಹಾಜರಾತಿ, ಉತ್ತಮ ಅಂಕ ಗಳಿಸಿ, ಡಿಗ್ರಿಗಳನ್ನು ಕೈಯಲ್ಲಿಟ್ಟುಕೊಂಡು ಸರ್ಕಾರಿ ಉದ್ಯೋಗಕ್ಕಾಗಿ ಬಹುತೇಕರು ತಯಾರಿ ನಡೆಸುತ್ತಾರೆ. ಇಷ್ಟೆಲ್ಲ ಮಾಡಲು ತಾಳ್ಮೆ ಇಲ್ಲದವರು ಮಾತ್ರ ಅಡ್ಡ ದಾರಿ ಹೀಡಿತಾರೆ. ಇಂತಹವರಿಗಾಗಿಯೇ ಹಾಜರಾತಿ, ಅಂಕಗಳು, ಡಿಗ್ರಿಗಳನ್ನು ನೀಡಲು ಅಂಗಡಿಗಳು ಸಿದ್ಧವಾಗಿದ್ದು, ಇವುಗಳನ್ನ ಸರಕುಗಳಂತೆ ಖರೀದಿಸುವ ವ್ಯವಸ್ಥೆ ಸಮಾಜದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಅದಕ್ಕೆ ಸಹಕರಿಸುವಂಥ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಹಣ ಗಳಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡಿವೆ. ಈ ರಕ್ಕಸರ ಹಾವಳಿಯಿಂದ ಪ್ರಾಮಾಣಿಕರು ಯಾರಿಗೂ ಕಾಣದಾಗೆ ಬಾಡಿಹೋಗುತ್ತಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಉದ್ಯಮವಾಗಿಸಿಕೊಂಡ ಶಿಕ್ಷಣ ಸಂಸ್ಥೆಗಳು ದೇಶದ ಮೂಲೆ ಮೂಲೆಯಲ್ಲೂ ಸಿಗುತ್ತವೆ. ಸಹಿಯೊಂದಕ್ಕೆ ₹10-15 ಸಾವಿರ ಕೈಯಲ್ಲಿಟ್ಟರೆ ಕ್ಷಣ ಮಾತ್ರದಲ್ಲಿ ಬೇಕಾದ ಸರ್ಟಿಫಿಕೇಟ್ ಕೈ ಸೇರುತ್ತದೆ. ಡಿಗ್ರಿ, ಪಿಜಿ, ಎಂಜಿನಿಯರಿಂಗ್ ಸರ್ಟಿಫಿಕೇಟ್ಗೆ ₹20-75 ಸಾವಿರದವರೆಗೂ ಬೇಡಿಕೆಯಿದೆ. ಇದಕ್ಕೆ ಮೊದಲೇ ದರ ನಿಗದಿಯಾಗಿರುತ್ತದೆ. ಅಲ್ಲದೇ, ಬಡ ವಿದ್ಯಾರ್ಥಿಗಳೊಂದಿಗೆ ಕಿತ್ತು ತಿನ್ನುವ ಲಂಚಕೋರರು ಹೆಚ್ಚಾಗಿ ಕೊರಿಯರ್ ಮೂಲಕ ವ್ಯವಹಾರ ನಡೆಸುತ್ತಾರೆ. ಅಷ್ಟೇ ಅಲ್ಲದೆ, ಎಷ್ಟೋ ಕಡೆ ಸರ್ಕಾರದ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿದೆ.
ಯಾವುದೇ ವಿಶ್ವವಿದ್ಯಾಲಯದಲ್ಲಿ ಆಗಲಿ ನೀಡುವ ಗಡುವಿನೊಳಗೆ ಬೇಕಾದ ಪ್ರಮಾಣ ಪತ್ರ ಕೈಸೇರುತ್ತದೆ. ವರ್ಷದ ಹಿಂದೆ ತೆಲುಗು ರಾಜ್ಯಗಳಲ್ಲಿ ನೂರಾರು ಸಲಹೆಗಾರರ ಮೂಲಕ ವಿವಿಧ ರಾಜ್ಯಗಳ ಖಾಸಗಿ ವಿಶ್ವವಿದ್ಯಾಲಯಗಳಿಂದ ಪಿಹೆಚ್ಡಿ ಪದವಿಗಳನ್ನು ಖರೀದಿಸಿದ ಗಂಭೀರ ಆರೋಪಗಳು ಕೇಳಿಬಂದವು. ನಕಲಿ ಪ್ರಮಾಣಪತ್ರಗಳೊಂದಿಗೆ ಆಚಾರ್ಯ ಪೀಠಕ್ಕೆ ಪ್ರವೇಶಿಸಿದವರ ಸಂಪೂರ್ಣ ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ಗವರ್ನರ್ ಸೂಚಿಸಿದ್ದರೂ ಈ ಅಕ್ರಮ ಬೆಳಕಿಗೆ ಬಂದಿರಲಿಲ್ಲ. ಆದರೆ, 'ಈನಾಡು-ಈಟಿವಿ' ನಡೆಸಿದ ಪರಿಶೋಧನೆಯಲ್ಲಿ ಏಜೆಂಟ್ಗಳ ಮೂಲಕ ಪಿಹೆಚ್ಡಿ ಪಡೆದ ಕತ್ತಲ ಸಾಮ್ರಾಜ್ಯ ಬೆಳಕಿಗೆ ಬಂದಿದೆ.
ಅಣ್ಣಾಮಲೈ (ತಮಿಳುನಾಡು) ವಿವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್ಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಹಾಯ ಮಾಡುವುದಾಗಿ ಹತ್ತು ಬೋಧಕ ವರ್ಗ ಮತ್ತು ಸಾರ್ವತ್ರಿಕ ಪದವಿ ಪೂರ್ವ ಕಾಲೇಜುಗಳ ಜೊತೆ ಸಮಾಲೋಚನೆ ನಡೆಸಿದ ಉದಾಹರಣೆಗಳೂ ಇವೆ. ಎಂ.ಟೆಕ್ ವಿದ್ಯಾರ್ಥಿಗೆ ಪಿಹೆಚ್.ಡಿ ಕೊಡಬಹುದಾ ಎಂಬ ಪ್ರಶ್ನೆಗೆ ಉತ್ತರಪ್ರದೇಶದ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದ ಹೆಸರು ಬಯಲಿಗೆ ಬಂತು. ಸಂಶೋಧನಾ ವಿದ್ಯಾರ್ಥಿ ಯಾರ ಮಾರ್ಗದರ್ಶನ ಇಲ್ಲದೇ ಆರಂಭದಿಂದ, ಮಂಡಿಸಿದ ವಿಷಯ ಸಲ್ಲಿಸುವವರೆಗೂ ಹಣ ಸುರಿದಿದ್ದ. ಅದು ಕೇವಲ ಆರು ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ಬೇರೆ ವಿಷಯಗಳಿಗೆ ಅಷ್ಟೂ ಖರ್ಚಾಗುವುದಿಲ್ಲ. ಗುಟ್ಟು ರಟ್ಟಾಗುತ್ತಿದ್ದಂತೆ ಹೈದರಾಬಾದ್ ದಂಧೆಗಳೂ ಬಹಿರಂಗವಾದವು. ಇಂಥ ಸಂಸ್ಥೆಗಳು ಇನ್ನೆಷ್ಟಿರಬಹುದು ನೀವೇ ಊಹಿಸಿ...