ಕರ್ನಾಟಕ

karnataka

ETV Bharat / bharat

ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಗೆಲುವು ಸಾಧಿಸಿದ್ದ ಭಾರತ - ರಾಜತಾಂತ್ರಿಕ ಯುದ್ಧ

ಕಾರ್ಗಿಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಲು ಎಲ್ಲಾ ಭಾರತೀಯ ಸಂಸ್ಥೆಗಳು ಸಾಮರಸ್ಯದಿಂದ ಕೆಲಸ ಮಾಡುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ ನೋಡಿಕೊಂಡರು..

kargil
kargil

By

Published : Jul 24, 2020, 3:05 PM IST

ಹೈದರಾಬಾದ್ :ಕಾರ್ಗಿಲ್ ಯುದ್ಧದ ಬಳಿಕ ಪಾಕಿಸ್ತಾನ ಆಕ್ರಮಣಕಾರಿ ಎಂದು ಭಾರತ ತನ್ನ ಪರಿಣಾಮಕಾರಿ ರಾಜತಾಂತ್ರಿಕತೆಯ ಮೂಲಕ ಜಗತ್ತಿಗೆ ಸಾಧಿಸಿದೆ. ತನ್ನ ಸುಳ್ಳು ಮತ್ತು ವಂಚನೆಯ ಮೂಲಕ ಗುರುತಿಸಿರುವ ಜಾಗತಿಕವಾಗಿ ಪಾಕಿಸ್ತಾನವನ್ನು ಇತರ ದೇಶಗಳು ಮಿತೃತ್ವದಿಂದ ಪ್ರತ್ಯೇಕಿಸಿವೆ.

ಕಾರ್ಗಿಲ್ ಯುದ್ಧದ ಬಳಿಕ ಪಾಕ್ ಇಡೀ ವಿಶ್ವದ ದೃಷ್ಠಿಯಲ್ಲಿಯೇ ಕೆಳ ಮಟ್ಟಕ್ಕೆ ತಲುಪಿತು. ಭಾರತ ತನ್ನ ರಾಷ್ಟ್ರೀಯ ಶಕ್ತಿಯ ಮಿಲಿಟರಿ ಮತ್ತು ರಾಜತಾಂತ್ರಿಕ ಅಂಶಗಳಿಂದ ಪಾಕಿಸ್ತಾನವನ್ನು ಮೂಲಗುಂಪು ಮಾಡಿದೆ.

ಕಾಶ್ಮೀರ ಸಮಸ್ಯೆಗಳ ಹಿಂದೆ ಪಾಕಿಸ್ತಾನದ ಪ್ರಚೋದನೆ ಇರುವುದು ಇಡೀ ಜಗತ್ತಿಗೆ ತಿಳಿದಿದ್ದು, ಈ ವಿಷಯದಲ್ಲಿ ಭಾರತದ ಕುರಿತು ಹಲವು ದೇಶಗಳು ಕನಿಕರ ಹೊಂದಿವೆ. ಪಾಕಿಸ್ತಾನ ಹಲವು ಬಾರಿ ಕದಮ ವಿರಾಮ ಉಲ್ಲಂಘಿಸುತ್ತಿದ್ದು, ಅನೇಕ ದೇಶಗಳು ತಾವು ಭಾರತದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿವೆ.

ಭಾರತದ ರಾಜತಾಂತ್ರಿಕ ವಿಜಯದ ಹಿಂದಿನ ಪ್ರಮುಖರು :

  • ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತವಾಗಿಯೇ ಇದ್ದರೂ, ಕಾರ್ಗಿಲ್‌ನಿಂದ ಪಾಕಿಸ್ತಾನವನ್ನು ಹೊರಹಾಕುವ ಉದ್ದೇಶದ ಬಗ್ಗೆ ಗಮನಹರಿಸಿದರು.
  • ಕಾರ್ಗಿಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಲು ಎಲ್ಲಾ ಭಾರತೀಯ ಸಂಸ್ಥೆಗಳು ಸಾಮರಸ್ಯದಿಂದ ಕೆಲಸ ಮಾಡುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ ನೋಡಿಕೊಂಡರು.
  • ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ರಾಜತಾಂತ್ರಿಕ ಪ್ರಯತ್ನ ಮುನ್ನಡೆಸಿದರು.
  • ವಿದೇಶಾಂಗ ಕಾರ್ಯದರ್ಶಿ ಕೆ ರಘುನಾಥ್ ಅವರು ಪಾಕಿಸ್ತಾನದ ಬೇಜವಾಬ್ದಾರಿತನವನ್ನು ವಿವರಿಸಲು ಭಾರತದ ರಾಜತಾಂತ್ರಿಕ ವಾದಗಳನ್ನು ತೀಕ್ಷ್ಣಗೊಳಿಸಿದರು.

ABOUT THE AUTHOR

...view details