ಕರ್ನಾಟಕ

karnataka

By

Published : Jul 25, 2019, 5:12 AM IST

ETV Bharat / bharat

ಈ ರಾಶಿಯುಳ್ಳವರು ಹಣಕಾಸಿನ ವ್ಯವಹಾರಗಳಿಂದ ದೂರವಿದ್ದರೆ ಉತ್ತಮ..!

ಈ ರಾಶಿಯುಳ್ಳವರ ಗ್ರಹಗಳ ಸ್ಥಾನವನ್ನು ನೋಡಿದರೆ, ಹಣಕಾಸಿನ ಅದೃಷ್ಟ ತಿರುಗು ಮುರುಗಾಗುವ ಸಾಧ್ಯತೆ ಇದೆ. ಹಾಗಾಗಿ ಹಣಕಾಸಿನ ವ್ಯವಹಾರಗಳ ವಿಷಯಕ್ಕೆ ಬಂದರೆ ಜಾಗರೂಕರಾಗಿದ್ದರೆ ಉತ್ತಮ ಎಂದು ಗಣೇಶ ಹೇಳುತ್ತಾನೆ.

ರಾಶಿ

ಮೇಷ:ನಿಮ್ಮ ನಿಜವಾದ ಮೌಲ್ಯವೇನೆಂದು ನೀವು ಪ್ರದರ್ಶಿಸಲು ಇಂದು ಸೂಕ್ತವಾದ ದಿನದಂತೆ ಕಾಣುತ್ತದೆ. ಕೆಲಸದ ವಿಷಯದಲ್ಲಿ, ಮಹತ್ತರ ಪ್ರಸ್ತಾವನೆಗಳು ಮತ್ತು ಸೃಜನಶೀಲ ಆಲೋಚೆಗಳಿಂದ ನೀವು ಅತ್ಯಂತ ಉತ್ಸುಕರಾಗಿರುತ್ತೀರಿ. ವಿಷಯಗಳು ಸರಾಗವಾಗಿ ಮುನ್ನಡೆಯದ ತಾತ್ಕಾಲಿಕ ಹಂತವಿರಬಹುದು, ಆದರೆ ಅದರಿಂದ ನೀವು ಭರವಸೆ ಕಳೆದುಕೊಳ್ಳಬೇಕೆಂದು ಅರ್ಥವಲ್ಲ. ನಿಮ್ಮ ಜೀವನದಲ್ಲಿ ಪ್ರವೇಶಿಸುವ ಋಣಾತ್ಮಕತೆಯನ್ನು ಹೊರದೂಡುವಲ್ಲಿ ನೀವು ಯಶಸ್ವಿಯಾದರೆ ನಿರಾಶೆ ಶಾಶ್ವತ ಅತಿಥಿಯಲ್ಲ.

ವೃಷಭ:ಇಂದು ನಿಮ್ಮ ಹಣೆಬರಹ ಏನು ತರುತ್ತದೋ ಅದಕ್ಕೆ ನೀವು ಶರಣಾಗಬೇಕಾದ ದಿನವಾಗಬಹುದು. ಹಾಗೆ ಮಾಡುವಲ್ಲಿ, ನೀವು ನಿಮ್ಮ ದಿನ ಇತರೆ ಯಾವುದೇ ಒಂದು ದಿನದಂತೆ ಎಂದು ಭಾವಿಸಬಹುದು, ಹಾಗಿದ್ದಲ್ಲಿ ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಉತ್ತಮ, ಏಕೆಂದರೆ ಅದು ತಪ್ಪಾಗುವ ಸಾಧ್ಯತೆಗಳಿವೆ.

ಮಿಥುನ: ನೀವು ಕೈಗೊಳ್ಳುವ ಯಾವುದೇ ಕೆಲಸ ಯಾವುದೇ ತಡವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು. ಆದರೆ ಅದಕ್ಕೆ, ನೀವು ನಿಮ್ಮ ಕೈಯಲ್ಲಿರುವ ಕೆಲಸವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಕಲಿಯಬೇಕು. ನಿಮ್ಮ ಎಲ್ಲ ಪ್ರಯತ್ನಗಳಿಗೂ ಬಹಳ ಬೇಗನೆ ಪುರಸ್ಕಾರ ದೊರೆಯುವುದರಿಂದ ನೀವು ಸಂತೋಷಪಡುತ್ತೀರಿ.

ಕರ್ಕಾಟಕ:ನಿಮಗೆ ಇಂದು ಅದೃಷ್ಟದೇವತೆ ಒಲಿದಿದ್ದಾಳೆ. ನೀವು ಭೂಮಿ, ಮನೆ ಅಥವಾ ಕಟ್ಟಡ ವ್ಯಾಪಾರದಿಂದ ಗಳಿಸುತ್ತೀರಿ. ಕಛೇರಿಯಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರ ಪಡೆಯುತ್ತೀರಿ. ಅತ್ಯಂತ ಲಾಭದಾಯಕ ದಿನ ನಿಮಗಾಗಿ ಕಾಯುತ್ತಿದೆ.

ಸಿಂಹ:ಬದಲಾವಣೆಗೆ ಇದು ನೀವು ಏನೋ ಒಂದು ಹೊಸದನ್ನು ಮಾಡುವ ಬಯಕೆ ಹೊಂದುತ್ತೀರಿ. ನಿಮ್ಮ ಮನಸ್ಥಿತಿ ಇಡೀ ದಿನ ಅತ್ಯಂತ ಉಜ್ವಲವಾಗಿರುತ್ತದೆ. ನೀವು ನಿಮ್ಮ ಶಕ್ತಿ ಮತ್ತು ಉತ್ಸಾಹದಿಂದ ಯಶಸ್ಸು ಸಾಧಿಸಲು ಶಕ್ತರಾಗುತ್ತೀರಿ. ಗ್ರಹಗಳು ನಿಮಗೆ ಅನುಕೂಲಕರವಾಗಿವೆ; ಆದ್ದರಿಂದ ನಿಮ್ಮ ದಾರಿಯಲ್ಲಿ ಎದುರಾಗುವ ಸವಾಲುಗಳನ್ನು ಒಪ್ಪಿಕೊಳ್ಳುತ್ತೀರಿ ಮತ್ತು ಅವುಗಳ ಮೇಲೆ ವಿಜಯ ಸಾಧಿಸುತ್ತೀರಿ.

ಕನ್ಯಾ:ಇಡೀ ದಿನ ಗೊತ್ತಿಲ್ಲದ ವಿಷಯಕ್ಕೆ ನಿಮ್ಮ ಮನಸ್ಸು ಭಯಗ್ರಸ್ತವಾಗಿರುತ್ತದೆ. ನಿಮ್ಮ ಮಿತ್ರರಲ್ಲಿ ಅತಿಯಾದ ಖರ್ಚು ಮಾಡುವ ಸನ್ನಿವೇಶಗಳಿಂದ ದೂರವಿರಿ. ಈ ದಿನ ನಿಮ್ಮಿಂದ ಕೊಂಚ ಜಾಗರೂಕತೆ ಅಗತ್ಯವಿದೆ.

ತುಲಾ:ರಿಯಲ್ ಎಸ್ಟೇಟ್ ಗಳು ಮತ್ತು ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳು ನಿಮಗೆ ಹಣವನ್ನು ತಂದುಕೊಡಲಿವೆ! ನಿಮ್ಮ ಮಕ್ಕಳು ಹೊಸ ಎತ್ತರಗಳನ್ನು ತಲುಪಲಿದ್ದು ನಿಮ್ಮ ಎದೆ ಹೆಮ್ಮೆಯಿಂದ ಬೀಗುತ್ತದೆ. ಕೆಲಸದ ವಿಷಯದಲ್ಲಿ, ವೇತನ ಹೆಚ್ಚಳ ನಿಮ್ಮ ದಾರಿಯಲ್ಲಿರುವುದನ್ನು ಗಮನಿಸಿ. ನಿಮ್ಮ ಪಿತ್ರಾರ್ಜಿತ ರೂಪದಲ್ಲಿ ಕೂಡಾ ಹಣಕಾಸಿನ ಅನುಕೂಲಗಳು ದೊರೆಯಬಹುದು.

ವೃಶ್ಚಿಕ: ನೀವು ಹೊಸ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗಿದೆ. ಆದಾಗ್ಯೂ, ಈ ಕಾರ್ಯಕ್ರಮಗಳು ನಿಮ್ಮ ನಿರೀಕ್ಷೆಗಳನ್ನು ತಲುಪದೇ ಇರುವ ಸಾಧ್ಯತೆಗಳಿವೆ. ಆದರೆ, ಭರವಸೆ ಕಳೆದುಕೊಳ್ಳಬೇಡಿ ಮತ್ತು ನಿರುತ್ಸಾಹಗೊಳ್ಳಬೇಡಿ. ನಿಮ್ಮ ಸ್ಫೂರ್ತಿಯನ್ನು ಎತ್ತರದಲ್ಲಿರಿಸಿಕೊಳ್ಳಿರಿ. ಯಶಸ್ವಿಯಾಗುವವರೆಗೂ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಶಾಲೆಯಲ್ಲಿ ಕಲಿತ ಮೊದಲ ಪಾಠವನ್ನು ಅನುಷ್ಠಾನಗೊಳಿಸಿ.

ಧನು:ನೀವು ನಿಮ್ಮ ವಿದೇಶಗಳ ಸಂಪರ್ಕಗಳನ್ನು ಬಳಸಿಕೊಳ್ಳುವುದರಿಂದ ನಿಮ್ಮ ವ್ಯಾಪಾರ ವಿಸ್ತರಿಸಲು ಸಜ್ಜಾಗಿದೆ. ನಿಮ್ಮ ಗುರಿಗಳನ್ನು ಪೂರೈಸಿಕೊಳ್ಳಲು ಪರಿಣಾಮಕಾರಿ ಸಂವಹನ ಕೌಶಲ್ಯಗಳು ನಿಮಗೆ ನೆರವಾಗಲಿದೆ. ಅಲ್ಲದೆ, ನಿಮ್ಮ ತಂಡದ ನಾಯಕನಾಗಲು ನೀವು ಎಲ್ಲ ಸರಿಯಾದ ನಡೆಗಳನ್ನೇ ಅನುಸರಿಸುತ್ತಿದ್ದೀರಿ.

ಮಕರ: ಮೊದಲ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದೇ ಇದ್ದರೆ, ಮತ್ತೆ ಪ್ರಯತ್ನಿಸಿರಿ. ಹಲವು ಮಂದಿ ಅವಿರತ ಪ್ರಯತ್ನ ಮತ್ತು ತಾಳ್ಮೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಆದರೆ ಈ ಎರಡೂ ಗುಣಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಕೋಪ ಮತ್ತು ಆತಂಕದಿಂದ ಸಿಡಿಯುವ ಬದಲಿಗೆ, ನಿಮ್ಮ ಯೋಜನೆಗಳ ಮೇಲೆ ಅದರಲ್ಲೂ ನಿಮ್ಮ ಯೋಜನೆಯಂತೆ ಫಲಿತಾಂಶಗಳು ಬಾರದೇ ಇರುವಾಗ ದೃಢವಾದ ನಂಬಿಕೆ ಇರಿಸಿ.

ಕುಂಭ:ನೀವು ಅತ್ಯುತ್ತಮ ಮಟ್ಟದ ತಾಳ್ಮೆ ಮತ್ತು ಪ್ರಾಯೋಗಿಕತೆ ಹೊಂದಿದ್ದೀರಿ, ಮತ್ತು ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಆದಾಗ್ಯೂ, ಇದು ನಿಮ್ಮ ಸುತ್ತಲಿನ ಜನರಿಗೆ ಯಾವುದೇ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಲು ಒಂದು ಕಾರಣ ನೀಡುತ್ತದೆ. ಇದು ನಿಮ್ಮನ್ನು ಅತ್ಯಂತ ಒತ್ತಡದಲ್ಲಿರಿಸಿ ನಿಮ್ಮನ್ನು ನಿರಾಶೆಗೆ ದೂಡುತ್ತದೆ.

ಮೀನ:ಇಂದು ನಿಮ್ಮ ಗ್ರಹಗಳ ಸ್ಥಾನವನ್ನು ನೋಡಿದರೆ, ಹಣಕಾಸಿನ ಅದೃಷ್ಟ ತಿರುಗು ಮುರುಗಾಗುವ ಸಾಧ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದೀರಿ. ಹಣಕಾಸಿನ ವ್ಯವಹಾರಗಳ ವಿಷಯಕ್ಕೆ ಬಂದರೆ ಜಾಗರೂಕರಾಗಿರಿ.

ABOUT THE AUTHOR

...view details