ಜಾರ್ಸುಗುಡ (ಒಡಿಶಾ): ಜಿಲ್ಲೆಯ ಬ್ರಜರಾಜ್ನಗರದ ತಾರಿನಿ ಮಂದಿರ ಛಾಖ ಪ್ರದೇಶದ ಎಟಿಎಂ ಒಳಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ಎಟಿಎಂಗೆ ಹಣ ತುಂಬಲು ಬ್ಯಾಂಕ್ ಸಿಬ್ಬಂದಿ ಬಂದಾಗ ನಾಗಪ್ಪ ಎಟಿಎಂ ಯಂತ್ರದ ಒಳಗೆ ಅವಿತು ಕೂತಿರುವುದನ್ನು ಕಂಡು ಹೌಹಾರಿದ್ದಾರೆ. ಬಳಿಕ ಉರಗ ತಜ್ಞರನ್ನು ಕರೆಯಿಸಿ ಹಾವು ರಕ್ಷಿಸಲಾಯಿತು.