ಹೈದರಾಬಾದ್: ಗಂಡನಿಗೆ ಹೃದಯಾಘಾತ ಆಗಿರುವುದರಿಂದ ಆತಂಕಕ್ಕೊಳಗಾದ ಪತ್ನಿಯೊಬ್ಬಳು ಆತನಿಗೂ ಮೊದ್ಲೇ ಸಾಯಲು ಇಚ್ಛಿಸಿದ್ದಳು. ಅದರಂತೆ ಆಕೆ ಗಂಡನಿಗೂ ಮೊದ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ ಜೂಬ್ಲಿಹಿಲ್ಸ್ನಲ್ಲಿ ನಡೆದಿದೆ.
ನಾರಾಯಣಪೇಟ ಜಿಲ್ಲೆಯ ನಾರಾಯಣಪೇಟ ಗ್ರಾಮದ ನಿವಾಸಿ ಸಿಂಧೂಜಾ ಹೈದರಾಬಾದ್ನ ಶಿವಕುಮಾರ್ ಎಂಬುವರನ್ನು ವಿವಾಹವಾಗಿದ್ದರು. ಇವರಿಗೆ 13, 8 ವರ್ಷದ ಮಕ್ಕಳಿಬ್ಬರಿದ್ದಾರೆ. ಖಾಸಗಿ ಉದ್ಯೋಗ ಮಾಡುತ್ತಿರುವ ಶಿವಕುಮಾರ್ಗೆ ನವೆಂಬರ್ 12ರಂದು ಹೃದಾಯಾಘಾತವಾಗಿತ್ತು. ಗಂಡನ ಆರೋಗ್ಯ ವಿಷಯದಲ್ಲಿ ಸಿಂಧೂಜಾ ತೀವ್ರ ಆಘಾತಕೊಳ್ಳಗಾಗಿದ್ದರು.
ಸಿಂಧೂಜಾ ಇಷ್ಟಕ್ಕೆ ಸುಮ್ಮನಾಗದೇ ಮಾನಸಿಕವಾಗಿ ಕುಗ್ಗಿದ್ದರು. ತನ್ನ ತಾಯಿ ರತ್ನಾದೇವಿಗೆ ಫೋನ್ ಮಾಡಿ ನನ್ನ ಗಂಡನ ಸಾವಿಗೂ ಮೊದ್ಲೇ ನಾನು ಪ್ರಾಣ ಬಿಡ್ತೀನಿ ಅಂತಾ ಹೇಳಿದ್ದರು. ಆಕೆಗೆ ತಾಯಿ ಧೈರ್ಯ ತುಂಬಿದ್ದರು. ಆದ್ರೂ ಸಹ ಸಿಂಧೂಜಾ ಸಮಾಧಾನವಾಗಿರಲಿಲ್ಲ.
ನವೆಂಬರ್ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಸೋಮವಾರ ಮೃತಪಟ್ಟಿದ್ದಾರೆ. ಸಿಂಧೂಜಾ ತಾಯಿ ರತ್ನಾದೇವಿ ಜೂಬ್ಲಿಹಿಲ್ಸ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.