ಕರ್ನಾಟಕ

karnataka

By

Published : Apr 18, 2020, 10:18 AM IST

ETV Bharat / bharat

ತನಿಖೆಗೆ ಸಹಕರಿಸಲು ಸಿದ್ಧ: ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ ಪತ್ರ

ದೆಹಲಿ ಪೊಲೀಸ್ ಅಪರಾಧ ಶಾಖೆಗೆ ಪತ್ರ ಬರೆದಿರುವ ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

police
police

ನವದೆಹಲಿ:ತಬ್ಲಿಘಿ ಜಮಾಅತ್ ಮುಖಂಡ ಮೌಲಾನಾ ಸಾದ್ ಕಂಧಲ್ವಿ ದೆಹಲಿ ಪೊಲೀಸ್ ಅಪರಾಧ ಶಾಖೆಗೆ ಪತ್ರ ಬರೆದಿದ್ದು, ತಾನು ತನಿಖೆಗೆ ಸಹಕರಿಸಲು ಸಿದ್ಧವೆಂದು ತಿಳಿಸಿದ್ದಾರೆ.

ಅದರ ಜೊತೆಗೆ, ಹೊಸ ಎಫ್‌ಐಆರ್‌ನ ಪ್ರತಿಯನ್ನು ಒದಗಿಸುವಂತೆ ತನಿಖಾ ಸಂಸ್ಥೆಗೆ ಕೇಳಿಕೊಂಡಿದ್ದಾರೆ.

ಏಪ್ರಿಲ್ 1 ಮತ್ತು 2 ರಂದು ನೀಡಿದ ಎರಡು ನೋಟಿಸ್‌ಗಳಿಗೆ ಉತ್ತರಿಸುವ ಮೂಲಕ ನಾನು ಈಗಾಗಲೇ ತನಿಖೆಗೆ ಸಹಕರಿಸುತ್ತಿದ್ದೇನೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ನಿಜಾಮುದ್ದೀನ್​ನಲ್ಲಿ ತಬ್ಲಿಘಿ ಜಮಾಅತ್ ಅನುಯಾಯಿಗಳು ಸಭೆ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸ್​ ಅಪರಾಧ ವಿಭಾಗವು ಮಾರ್ಚ್ 31ರಂದು ಮೌಲ್ವಿ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ABOUT THE AUTHOR

...view details