ಕರ್ನಾಟಕ

karnataka

ETV Bharat / bharat

ಬೆಚ್ಚಿಬಿದ್ದ ಹರಿಯಾಣ...! ಆಗಂತುಕನಿಂದ ಕಾಂಗ್ರೆಸ್ ನಾಯಕನ ಹತ್ಯೆ - ವಿಕಾಸ್ ಚೌಧರಿ

ಹರಿಯಾಣ ಕಾಂಗ್ರೆಸ್​ ಅಧ್ಯಕ್ಷ ತಮ್ಮ ಪಕ್ಷದ ನಾಯಕನ ಹತ್ಯೆ ಖಂಡಿಸಿದ್ದು,  ಜಂಗಲ್​ ರಾಜನ ರಾಜ್ಯದಲ್ಲಿ ಕಾನೂನು ಹಾಗೂ ಭದ್ರತೆ ಸಂಪೂರ್ಣ ಹಳ್ಳ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕಾಸ್ ಚೌಧರಿ

By

Published : Jun 27, 2019, 12:46 PM IST

ಫರೀದಾಬಾದ್: ಹರಿಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿಯನ್ನು ದೆಹಲಿ ಸಮೀಪದ ಫರೀದಬಾದ್​​ನಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಇಂದು ಮುಂಜಾನೆ ವಿಕಾಸ್ ಚೌಧರಿ ಜಿಮ್​​ ಮುಗಿಸಿ ಹೊರಬರುತ್ತಿದ್ದ ವೇಳೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಆಗಂತುಕರು ಮಾರುತಿ ಸುಜುಕಿ ಎಸ್​ಎಕ್ಸ್​4 ಕಾರಿನಲ್ಲಿ ಆಗಮಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಿಚಿತರಿಂದ ಕಾಂಗ್ರೆಸ್ ನಾಯಕನ ಹತ್ಯೆ

ಹರಿಯಾಣ ಕಾಂಗ್ರೆಸ್​ ಅಧ್ಯಕ್ಷ ತಮ್ಮ ಪಕ್ಷದ ನಾಯಕನ ಹತ್ಯೆ ಖಂಡಿಸಿದ್ದು, ಜಂಗಲ್​ ರಾಜನ ರಾಜ್ಯದಲ್ಲಿ ಕಾನೂನು ಹಾಗೂ ಭದ್ರತೆ ಸಂಪೂರ್ಣ ಹಳ್ಳ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

38 ವರ್ಷದ ವಿಕಾಸ್ ಚೌಧರಿ ಕೆಲ ದಿನಗಳ ಹಿಂದೆ ರಾಷ್ಟ್ರೀಯ​ ಲೋಕ ದಳವನ್ನು ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು.

ABOUT THE AUTHOR

...view details