ಪಕ್ಷ | ಮುನ್ನಡೆ | ಗೆಲುವು | ಗಳಿಕೆ ಅಥವಾ ಇಳಿಕೆ |
ಬಿಜೆಪಿ | 00 | 40 | -7 |
ಕಾಂಗ್ರೆಸ್ | 00 | 31 | 16 |
ಐಎನ್ಎಲ್ಡಿ | 00 | 01 | -19 |
ಜೆಜೆಪಿ | 00 | 10 | +10 |
ಇತರ | 00 | 08 | +2 |
ಒಟ್ಟು | 00 | 90 |
18:04 October 24
ಹರಿಯಾಣ: ಗೆಲುವು-ಮುನ್ನಡೆ ಹೀಗಿದೆ
18:03 October 24
ರಾಜ್ಯಪಾಲರನ್ನು ಭೇಟೆ ಮಾಡಲಿರುವ ಹರಿಯಾಣ ಸಿಎಂ ಖಟ್ಟರ್
- ಹರಿಯಾಣದ ಹಾಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್, ಇಂದು ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಲ್ಲಿ ಮಾತನಾಡಲಿದ್ದಾರೆ.
18:03 October 24
ಬಿಜೆಪಿ ನಾಯಕ ಅನಿಲ್ ವಿಜ್ಗೆ ಜಯ
- ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರೋ ಹರಿಯಾಣದ ಹಾಲಿ ಮಂತ್ರಿ ಹಾಗೂ ಬಿಜೆಪಿ ನಾಯಕ ಅನಿಲ್ ವಿಜ್ ಜಯಗಳಿಸಿದ್ದಾರೆ.
17:02 October 24
ದುಶ್ಯಂತ್ ಚೌತಲಾ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್ ಅಧ್ಯಕ್ಷ
- ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದ ರಾಜ್ಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್
16:46 October 24
ಗರ್ಹಿ ಸಂಪ್ಲಾ ಕಿಲೋಯಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಬಿಎಸ್ ಹೂಡಾ ಗೆಲುವು
- ಪ್ರಜೆಗಳ ಆದೇಶ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧವಿದೆ.
- ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಲಿಷ್ಟ ಸರ್ಕಾರ ರಚಿಸಲು ಮುಂದೆ ಬರಬೇಕು.
- ಜೆಜೆಪಿ, ಬಿಎಸ್ಪಿ, ಐಎನ್ಎಲ್ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಸರ್ಕಾರ ರಚನೆಗೆ ಮುಂದೆ ಬರಬೇಕಿದೆ.
- ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ
- ಗರ್ಹಿ ಸಂಪ್ಲಾ ಕಿಲೋಯಿ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿರುವ ಬಿಎಸ್ ಹೂಡಾ
16:31 October 24
ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ: ಜೆಜೆಪಿ ನಾಯಕ ದುಶ್ಯಂತ್ ಚೌತಲಾ
- ಮತಎಣಿಕೆ ಕಾರ್ಯ ನಡೆಯುತ್ತಿದೆ. ಗೆಲುವು ನಮ್ಮದಾದ ತಕ್ಷಣ ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ.
- ನಾಳೆ ಶಾಸಕರೊಂದಿಗೆ ಸಭೆ ನಡೆಸಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ.
- ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ. ಹೀಗಾಗಿ ಜೆಜೆಪಿ ಅದನ್ನು ತರುತ್ತದೆ.
- ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಪ್ರತಿಕ್ರಿಯೆ
16:12 October 24
ಬಿಜೆಪಿ ನಾಯಕ ಓಂಪ್ರಕಾಶ್ ಧಂಕಾರ್ಗೆ ಸೋಲು
- ಬಾದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಓಂಪ್ರಕಾಶ್ ಧಂಕಾರ್ ಸೋಲೊಪ್ಪಿಕೊಂಡಿದ್ದಾರೆ.
- ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್ ವಿರುದ್ಧ 9266 ಮತಗಳ ಅಂತರದಲ್ಲಿ ಸೋತ ಓಂಪ್ರಕಾಶ್
- ಐಎನ್ಎಲ್ಡಿ ನಾಯಕ ಅಭಯ್ ಚೌಟಾಲ ಎಲ್ಲೆನಾಬಾದ್ ಕ್ಷೇತ್ರದಲ್ಲಿ ಜಯ
15:06 October 24
ಮುನ್ನಡೆಯಲ್ಲಿ ಹಾಲಿ ಮುಖ್ಯಮಂತ್ರಿ
- ಕರ್ನಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರ್ ಲಾಲ್ ಖತ್ತರ್ 41,950 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
- ಕಾಂಗ್ರೆಸ್ನ ತಾರ್ಲೋಚನ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.
15:02 October 24
ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ದಿಗ್ವಿಜಯ
- ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ 30,000 ಮತಗಳಿಂದ ಜಯಗಳಿಸಿದ್ದಾರೆ.
- ಟಿಕ್ ಟಾಕ್ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ಸೊನಾಲಿ ಫೋಗತ್ ಆದಂಪುರ್ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದ್ದಾರೆ.
- ಶಹಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೃಷ್ಣನ್ ಕುಮಾರ್ ಬೇಡಿ ಪರಾಭವಗೊಂಡಿದ್ದಾರೆ. ಜೆಜೆಪಿ ಅಭ್ಯರ್ಥಿ ರಾಮ್ ಕರಣ್ ವಿರುದ್ಧ 37,127 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.
14:12 October 24
ಬನ್ನಿ, ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ: ಕಾಂಗ್ರೆಸ್ ನಾಯಕ ಡಿಎಸ್ ಹೂಡಾ
- ಜನರು ಮನೋಹರ್ ಲಾಲ್ ಖತ್ತರ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ.
- ಜೆಜೆಪಿ ನಾಯಕ ದುಶ್ಯಂತ್ ಚೌಟಾಲ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ
- ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ
- ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ
- ಕಾಂಗ್ರೆಸ್ ನಾಯಕ ಡಿಎಸ್ ಹೂಡಾ ಹೇಳಿಕೆ
13:48 October 24
ಕಾಂಗ್ರೆಸ್ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ : ಬಿ ಎಸ್ ಹೂಡಾ
- ಕಾಂಗ್ರೆಸ್ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ
- ಜೆಜೆಪಿ, ಐಎನ್ಎಲ್ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಟ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ
- ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆಂದು ನಾನು ಭರವಸೆ ನೀಡುತ್ತೇನೆ.
- ರೋಹ್ಟಕ್ನಲ್ಲಿ ಮಾತನಾಡಿದ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ
13:39 October 24
ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ!
- ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ
- ಸದ್ಯದ ಚಿತ್ರಣ ನೋಡಿದರೆ ಮ್ಯಾಜಿಕ್ ಸಂಖ್ಯೆಯನ್ನು ಬಿಜೆಪಿ ದಾಟುವಂತೆ ಕಾಣುತ್ತಿಲ್ಲ
- ಬಹುಮತ ಗಳಿಸಲು ಕೇಸರಿ ಪಡೆ ಒದ್ದಾಡುತ್ತಿದೆ ಎಂದ ಸುಭಾಷ್ ಬರಾಲಾ
13:20 October 24
ಹರಿಯಾಣ ಹಣಕಾಸು ಸಚಿವ ಪ್ರತಿಕ್ರಿಯೆ
- ಮತದಾರ ಪ್ರಭುವಿನ ಆದೇಶ ಜೆಜೆಪಿ ಪರ ಇರುವಂತಿದೆ
- ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಲೇ ಬೇಕು
- ಹರಿಯಾಣ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯು ಅಭಿಪ್ರಾಯ
- ಹರಿಯಾಣದ ಹಿಸಾರ್ ಜಿಲ್ಲೆಯ ನಾರ್ನೌಂಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಅಭಿಮನ್ಯು
13:08 October 24
ಕಾಂಗ್ರೆಸ್ ನಾಯಕ ಮಮ್ಮನ್ ಖಾನ್ಗೆ ಗೆಲುವು
- ಕಾಂಗ್ರೆಸ್ ನಾಯಕ ಮಮ್ಮನ್ ಖಾನ್, ಫಿರೋಜ್ಪುರ್ ಜಿರ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
- ಮಮ್ಮನ್ ಖಾನ್ ಬಿಜೆಪಿಯ ನಸೀಮ್ ಅಹ್ಮದ್ರನ್ನು ಸೋಲಿಸಿದ್ದಾರೆ.
12:55 October 24
ಬಿಜೆಪಿ ಅಭ್ಯರ್ಥಿ ಕವಿತಾ ಜೈನ್ಗೆ ಸೋಲು
ಹರಿಯಾದ ಮಂತ್ರಿ ಹಾಗೂ ಸೋನಿಪತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವಿತಾ ಜೈನ್ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಪನ್ವಾರ್ ವಿರುದ್ಧ ಕವಿತಾ ಜೈನ್ ಮುಗ್ಗರಿಸಿದ್ದಾರೆ.
12:50 October 24
ಯೋಗೇಶ್ವರ್ ದತ್ಗೆ ಹಿನ್ನಡೆ
ಬರೋಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ಗೆ 3590 ಮತಗಳ ಹಿನ್ನಡೆ
12:38 October 24
ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ
ಒಟ್ಟು11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಕರ್ತರು ಜಿಂದ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
12:37 October 24
ಜೆಜೆಪಿ ಕಾರ್ಯಕರ್ತರ ಸಂಭ್ರಮ
ಹರಿಯಾಣದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ ಬಿಜೆಪಿಯ ಬಬಿತಾ ಫೋಗತ್, 2387 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
12:17 October 24
ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಬಿತಾ ಫೋಗತ್ ಮುನ್ನಡೆ
ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೆ ಎಂಬ ಮಾತಿನ ಬಗ್ಗೆ ಜೆಜೆಪಿ(ಜನ್ನಾಯಕ್ ಜನತಾ ಪಕ್ಷ) ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
12:13 October 24
ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ
- ಹಿರಿಯ ಬಿಜೆಪಿ ನಾಯಕ ಅನಿಲ್ ವಿಜ್ಗೆ 3,569 ಮತಗಳ ಮುನ್ನಡೆ
- ಹರಿಯಾಣದಲ್ಲಿ ಮ್ಯಾಜಿಕ್ ನಂಬರ್ 46
- ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
- ಸದ್ಯ ಕಾಂಗ್ರೆಸ್ ಒಟ್ಟು 30 ಸೀಟುಗಳ ಮುನ್ನಡೆ
12:06 October 24
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.
11:44 October 24
ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಿನ ಸಮರ!
ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.