ಕರ್ನಾಟಕ

karnataka

ETV Bharat / bharat

4 ಸಿಕ್ಸರ್​, 3 ವಿಕೆಟ್​​: ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಸುಳಿವು ನೀಡಿದ ಹಾರ್ದಿಕ್​ ಪಾಂಡ್ಯ!

ಕಳೆದ ಐದು ತಿಂಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಇದೀಗ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಸುಳಿವು ನೀಡಿದ್ದಾರೆ.

By

Published : Feb 28, 2020, 9:43 PM IST

Hardik Pandy
ಹಾರ್ದಿಕ್​​ ಪಾಂಡ್ಯ

ಹೈದರಾಬಾದ್​:ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡು ತಂಡದಿಂದ ಹೊರಗುಳಿದು ಬರೋಬ್ಬರಿ 5 ತಿಂಗಳಾಯ್ತು. ಇದೀಗ ಬ್ಲೂ ಬಾಯ್ಸ್​ ಸೇರಿಕೊಳ್ಳುವ ತವಕದಲ್ಲಿರುವ ಪಾಂಡ್ಯ ತಮ್ಮ ಸಾಮರ್ಥ್ಯ ಹೊರಹಾಕಿದ್ದಾರೆ.

ಡಿವೈ ಪಾಟೀಲ್​​ ಟಿ-20 ಕ್ರಿಕೆಟ್​ ಟೂರ್ನಿಯಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಈ ಪ್ಲೇಯರ್​ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಕಳೆದ ಸೆಪ್ಟಂಬರ್​ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ-20 ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪಾಂಡ್ಯಾ ತದನಂತರ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇದೀಗ ಡಿವೈ ಪಾಟೀಲ್​ ಟಿ-20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಈ ಪ್ಲೇಯರ್​ 25 ಎಸತಗಳಲ್ಲಿ 38ರನ್​ಗಳಿಕೆ ಮಾಡಿದ್ರು. ಇದರಲ್ಲಿ ನಾಲ್ಕು ಸಿಕ್ಸರ್​ ಸೇರಿಕೊಂಡಿದ್ದವು.

ಇದಾದ ಬಳಿಕ ಬೌಲಿಂಗ್​ನಲ್ಲಿ ಕೈಚಳಕ ತೋರಿರುವ ಪಾಂಡ್ಯ 3.4 ಓವರ್​​ಗಳಲ್ಲಿ 26ರನ್​ ನೀಡಿ ಪ್ರಮುಖ ಮೂರು ವಿಕೆಟ್​ ಕಬಳಿಸಿದ್ದಾರೆ. ಹೀಗಾಗಿ ಬ್ಯಾಂಕ್​ ಆಫ್​ ಬರೋಡಾ ವಿರುದ್ಧ ರಿಲಯನ್ಸ್​​​ 1 ವಿರುದ್ಧ 25 ರನ್​ಗಳ ಜಯ ಸಾಧಿಸಿದೆ.

ABOUT THE AUTHOR

...view details