ಕರ್ನಾಟಕ

karnataka

ರೈಲ್ವೆ ಏಜೆಂಟ್ ರನ್ನು ಗುಂಡಿಕ್ಕಿ ಕೊಂದು ಬಂದೂಕುಧಾರಿಗಳು ಎಸ್ಕೇಪ್

By

Published : Aug 21, 2020, 4:18 PM IST

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ರೈಲ್ವೆ ಏಜೆಂಟ್ ರನ್ನು  ಗುಂಡಿಕ್ಕಿ ಕೊಂದು ಬಂದೂಕುಧಾರಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

Gunmen
Gunmen

ರಾಜಸ್ಥಾನ: ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ರೈಲ್ವೆ ಏಜೆಂಟ್ ರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.

ಖಾನ್ ಸಿಂಗ್ ರಾವಣ ರಜಪೂತ್ ಎಂಬುವರು ಚಹಾ ಅಂಗಡಿ ಬಳಿ ಕುಳಿತಿದ್ದಾಗ ಹಲ್ಲೆಕೋರರು ಅವರ ಎದೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸಿಂಗ್ ನನ್ನು ಆಸ್ಪತ್ರೆಗೆ ಕರೆ ತಂದ ಬಳಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details