ಕರ್ನಾಟಕ

karnataka

ETV Bharat / bharat

ಮುಹೂರ್ತಕ್ಕೂ ಮುನ್ನವೇ ಮದುವೆ ಮಂಟಪದಲ್ಲೇ ವರ ನೇಣಿಗೆ ಶರಣು! - ಮೆಡ್ಚಲ್​ನಲ್ಲಿ ವರ ನೇಣಿಗೆ ಶರಣು ಸುದ್ದಿ

ಇಂದು ಮದುವೆಯಾಗಬೇಕಿದ್ದ ವರನೊಬ್ಬ ಮಂಟಪದ ಹಾಲ್​ನಲ್ಲೇ ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮುಹೂರ್ತಕ್ಕೂ ಮುನ್ನವೇ ವಿಷಾದ

By

Published : Nov 10, 2019, 2:35 PM IST

ಮೆಡ್ಚಲ್​​:ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವಕನೊಬ್ಬ ಮದುವೆ ಮಂಟಪದ ಹಾಲ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೆಡ್ಚಲ್​ ಜಿಲ್ಲೆಯಲ್ಲಿ ನಡೆದಿದೆ.

ಸಾಫ್ಟ್​ವೇರ್​ ಎಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ ಹೈದರಾಬಾದ್​ ನಿವಾಸಿ ಸಂದೀಪ್​ಗೆ ಇಂದು ಮದುವೆ ನಿಶ್ಚಿಯವಾಗಿತ್ತು. ​ಮೆಡ್ಚಲ್​ ಜಿಲ್ಲೆಯ ಕೊಂಪಲ್ಲಿ ನಗರದ ಫಂಕ್ಷನ್​ ಹಾಲ್​​ವೊಂದರಲ್ಲಿ ಮದುವೆ ಕಾರ್ಯಾಕ್ರಮ ಇತ್ತು. ಎಲ್ಲವೂ ಸಂತೋಷದಿಂದ ನಡೆಯುತ್ತಿತ್ತು. ಆದರೆ ಮುಹೂರ್ತಕ್ಕೂ ಮುನ್ನವೇ ವರ ನೇಣಿಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸುದ್ದಿ ತಿಳಿದ ಪೇಟ್​ ಬಶೀರಾಬಾದ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details