ಕರ್ನಾಟಕ

karnataka

By

Published : Jan 10, 2020, 7:07 PM IST

ETV Bharat / bharat

ಶಿಕ್ಷಕ, ಪತಂಜಲಿ ಅಂಗಡಿ ಮಾಲೀಕ: ಗೌರಿ ಲಂಕೇಶ್ ಹತ್ಯೆ ಆರೋಪಿಗಿದೆಯಂತೆ 'ಮಹಾ' ಲಿಂಕ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಪೊಲೀಸರಿಂದ ಬಂಧಿಸಲ್ಪಟ್ಟ ಜಾರ್ಖಂಡ್ ಮೂಲದ ಆರೋಪಿ ಹೃಷಿಕೇಶ್ ದೇವಾಡಿಕರ್ ಮಹಾರಾಷ್ಟ್ರದಲ್ಲಿ ಪತಂಜಲಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

Gauri Lankesh murder case,ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ
ಗೌರಿ ಲಂಕೇಶ್ ಹತ್ಯೆ ಆರೋಪಿ

ಔರಂಗಾಬಾದ್(ಮಹಾರಾಷ್ಟ್ರ): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್​ಐಟಿ ಪೊಲೀಸರು ಬಂಧಿಸಿರುವ ಜಾರ್ಖಂಡ್ ಮೂಲದ ರಿಷಿಕೇಶ್ ಧನ್ಬಾದ್ ಎರಡು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಆರೋಪಿ ಹೃಷಿಕೇಶ್ ದೇವಾಡಿಕರ್ 2 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಿದ್ದ

ಆರೋಪಿ ಹೃಷಿಕೇಶ್ ದೇವಾಡಿಕರ್ 2014 ರಿಂದ 2016 ವರಗೆ ಪತ್ನಿ ಮತ್ತು ಪೋಷಕರೊಂದಿಗೆ ಮಹಾರಾಷ್ಟ್ರದ ಔರಂಗಾಬಾದ್​ನ ನಿವಾಸಿ ಯಶವಂತ್ ಶುಕ್ಲಾ ಎಂಬುವವರ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಅಲ್ಲದೆ ಇದೇ ಪ್ರದೇಶದಲ್ಲಿ ಪತಂಜಲಿ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ತನ್ನ ಪತಂಜಲಿ ಅಂಗಡಿಯನ್ನು ಮಾರಾಟ ಮಾಡಿದ ಹೃಷಿಕೇಶ್ ಸೋಲಾಪುರಲ್ಲಿ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪಾಠ ಹೇಳಲು ತೆರಳುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details