ಕರ್ನಾಟಕ

karnataka

ETV Bharat / bharat

ಗಾಂಧೀಜಿ ಚಿಂತನೆ ಸಾರುವ ದೃಶ್ಯರೂಪಕ ಬಿಡುಗಡೆ... ನಮೋ ಜೊತೆ ಬಾಲಿವುಡ್​​ ನಟ-ನಟಿಯರು ಭಾಗಿ! - ಬಾಲಿವುಡ್​ ನಟ-ನಟಿಯರ ಭೇಟಿ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನದ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬಾಲಿವುಡ್​ ನಟ-ನಟಿಯರೊಂದಿಗೆ ಸಂವಾದ ನಡೆಸಿದರು.

ಬಾಲಿವುಡ್​​ ನಟ-ನಟಿಯರೊಂದಿಗೆ ನಮೋ ಸಂವಾದ

By

Published : Oct 20, 2019, 12:04 AM IST

Updated : Oct 20, 2019, 12:19 AM IST

ನವದೆಹಲಿ: ಇಡೀ ದೇಶವೇ ಮಹಾತ್ಮಾ ಗಾಂಧೀಜಿ ಅವರ 150ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಇದೇ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್​ ನಟ-ನಟಿಯರೊಂದಿಗೆ ಇಂದು ಸಂವಾದ ಕಾರ್ಯಕ್ರಮ ನಡೆಸಿದರು.

ಬಾಲಿವುಡ್​​ ನಟ-ನಟಿಯರೊಂದಿಗೆ ನಮೋ ಸಂವಾದ

ಲೋಕ್​ ಕಲ್ಯಾಣ ಮಾರ್ಗದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟರಾದ ಶಾರುಖ್​ ಖಾನ್​, ಆಮೀರ್​ ಖಾನ್​, ರಾಜ್​ಕುಮಾರ್ ಹಿರಾನಿ, ಕಂಗನಾ ರಣಾವತ್, ಆನಂದ್ ರೈ, ಎಸ್.ಪಿ.ಬಾಲಸುಬ್ರಹ್ಮಣ್ಯ, ಸೋನಂ ಕಪೂರ್, ಜಾಕಿ ಶ್ರಾಫ್​, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಬಾಲಿವುಡ್​ನ ಎಲ್ಲಾ ಪ್ರಮುಖರು ಭಾಗಿಯಾಗಿದ್ದರು. ಇದೇ ವೇಳೆ ಮಹಾತ್ಮರ ಚಿಂತನೆ ಸಾರುವ ದೃಶ್ಯರೂಪಕ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಬಾಲಿವುಡ್​ ನಟರು ಭಾಗಿಯಾಗಿದ್ದಾರೆ.

ಬಾಲಿವುಡ್​​ ನಟ-ನಟಿಯರೊಂದಿಗೆ ನಮೋ ಮಾತು
ಮೋದಿ ಜತೆ ನಟ-ನಟಿಯರ ಸೆಲ್ಫಿ
ಸೆಲ್ಪಿ ವಿತ್​ ನಮೋ

ಈ ದೃಶ್ಯರೂಪಕ ರಾಜ್​ಕುಮಾರ್​ ಹಿರಾನಿ ನಿರ್ಮಾಣ ಸಂಸ್ಥೆ ತಯಾರು ಮಾಡಿದ್ದು, 1.40 ನಿಮಿಷಗಳ ದೃಶ್ಯ ರೂಪಕದಲ್ಲಿ ನಟರಾದ ಸಲ್ಮಾನ್​ ಖಾನ್​, ಆಮೀರ್​ ಖಾನ್​, ಶಾರೂಖ್​ ಖಾನ್​ ಸೇರಿದಂತೆ ಪ್ರಮುಖ ನಟಿಯರು ಕಾಣಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಜತೆ ಸಂವಾದ ನಡೆಸಿರುವ ಕುರಿತು ಎಲ್ಲ ಬಾಲಿವುಡ್​ ನಟ-ನಟಿಯರು ತಮ್ಮ ಅಭಿಪ್ರಾಯ ಹೊರಹಾಕಿದ್ದು, ಅದನ್ನ ತಮ್ಮ ಟ್ಟಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್​​ ನಟ-ನಟಿಯರ ಭೇಟಿ ಮಾಡಿದ ನಮೋ
ಬಾಲಿವುಡ್​​ ನಟ-ನಟಿಯರೊಂದಿಗೆ ನಮೋ ಸಂವಾದ
ಬಾಲಿವುಡ್​​ ನಟ-ನಟಿಯರೊಂದಿಗೆ ನಮೋ

ಇದೇ ವೇಳೆ ಬಾಲಿವುಡ್​ ನಟ-ನಟಿಯರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ದೇಶದ ತುಂಬಾ ಪ್ರಸಾರ ಮಾಡುವಂತೆ ಮನವಿ ಮಾಡಿಕೊಂಡರು.

Last Updated : Oct 20, 2019, 12:19 AM IST

ABOUT THE AUTHOR

...view details