ಹೈದರಾಬಾದ್:ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೊರೊನಾ ಸೋಂಕಿತ ಕೈದಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ ಪಡೆಯುತಿದ್ದ ಕೊರೊನಾ ಸೋಂಕಿತ ನಾಲ್ವರು ಕೈದಿಗಳು ಆಸ್ಪತ್ರೆಯಿಂದ ಎಸ್ಕೇಪ್! - ಆಸ್ಪ್ರೆಯಿಂದ ಕೊರೊನಾ ಸೋಂಕಿತ ಕೈದಿಗಳು ಪರಾರಿ
ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೈದಿಗಳು ಎಸ್ಕೇಪ್ ಆಗಿದ್ದಾರೆ.

ಆಗಸ್ಟ್ 26ರಂದು ಸಿಕಂದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೋವಿಡ್-19 ಸೋಂಕಿಗೆ ತುತ್ತಾದ ನಾಲ್ವರು ಕೈದಿಗಳು ಆಸ್ಪತ್ರೆಯ ಕೈದಿಗಳ ವಾರ್ಡ್ನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಾಹಿತಿ ನೀಡಿದ್ದಾರೆ
ಎಂಡಿ. ಅಬ್ದುಲ್ ಅರ್ಬಾಜ್, ಎಂಡಿ. ಜಾವೀದ್, ಮಂಗಲಿ ಸೋಮಸುಂದರ್ ಮತ್ತು ಪಾರ್ವತಮ್ ನರಸಯ್ಯ ಪರಾರಿಯಾದ ಕೈದಿಗಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತಪ್ಪಿಸಿಕೊಂಡ ಕೈದಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಚರ್ಲಪಲ್ಲಿ ಜೈಲಿನ ಕೈದಿಗಳಾಗಿದ್ದಾರೆ.