ಕರ್ನಾಟಕ

karnataka

ETV Bharat / bharat

ಚಿಕಿತ್ಸೆ ಪಡೆಯುತಿದ್ದ ಕೊರೊನಾ ಸೋಂಕಿತ ನಾಲ್ವರು ಕೈದಿಗಳು ಆಸ್ಪತ್ರೆಯಿಂದ ಎಸ್ಕೇಪ್​​! - ಆಸ್ಪ್ರೆಯಿಂದ ಕೊರೊನಾ ಸೋಂಕಿತ ಕೈದಿಗಳು ಪರಾರಿ

ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೈದಿಗಳು ಎಸ್ಕೇಪ್ ಆಗಿದ್ದಾರೆ.

Four prisoners escaped from Hyderabad hospital
ಕೊರೊನಾ ಸೋಂಕಿತ ಕೈದಿಗಳು ಆಸ್ಪತ್ರೆಯಿಂದ ಎಸ್ಕೇಪ್

By

Published : Aug 29, 2020, 9:07 AM IST

ಹೈದರಾಬಾದ್:ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೊರೊನಾ ಸೋಂಕಿತ ಕೈದಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಗಸ್ಟ್ 26ರಂದು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೋವಿಡ್-19 ಸೋಂಕಿಗೆ ತುತ್ತಾದ ನಾಲ್ವರು ಕೈದಿಗಳು ಆಸ್ಪತ್ರೆಯ ಕೈದಿಗಳ ವಾರ್ಡ್‌ನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಾಹಿತಿ ನೀಡಿದ್ದಾರೆ

ಎಂಡಿ. ಅಬ್ದುಲ್ ಅರ್ಬಾಜ್, ಎಂಡಿ. ಜಾವೀದ್, ಮಂಗಲಿ ಸೋಮಸುಂದರ್ ಮತ್ತು ಪಾರ್ವತಮ್ ನರಸಯ್ಯ ಪರಾರಿಯಾದ ಕೈದಿಗಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತಪ್ಪಿಸಿಕೊಂಡ ಕೈದಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಚರ್ಲಪಲ್ಲಿ ಜೈಲಿನ ಕೈದಿಗಳಾಗಿದ್ದಾರೆ.

ABOUT THE AUTHOR

...view details