ಕರ್ನಾಟಕ

karnataka

ETV Bharat / bharat

ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ​ ವೇಳೆ ಭೀಕರ ರಸ್ತೆ ಅಪಘಾತ.. ನಾಲ್ವರ ದುರ್ಮರಣ! - ನಾಲ್ವರು ಸಾವು

ಕೃಷ್ಣ ಜಿಲ್ಲೆಯ ಮೆಡೂರಿನ ಆರು ಮಂದಿ ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಗುಂಡ್ಲಪಲ್ಲಿ ಗಾಮ್ರದ ಬಳಿ ಹಾಲಿನ ಟ್ಯಾಂಕ್​ ಹಿಂಬದಿಗೆ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ನಾಲ್ವರು ಸಾವು

By

Published : Jul 28, 2019, 12:55 PM IST

ಪ್ರಕಾಶಂ: ಇಂದು ಬೆಳಗ್ಗೆ ಕಾರೊಂದು ಹಾಲಿನ ಟ್ಯಾಂಕ್​ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣ ಜಿಲ್ಲೆಯ ಮೆಡೂರಿನ ಆರು ಮಂದಿ ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಗುಂಡ್ಲಪಲ್ಲಿ ಗಾಮ್ರದ ಬಳಿ ಹಾಲಿನ ಟ್ಯಾಂಕ್​ ಹಿಂಬದಿಗೆ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ​ ವೇಳೆ ಅಪಘಾತ

ಈ ರಸ್ತೆ ಅಪಘಾತದಿಂದಾಗಿ ಡ್ರೈವರ್​ ಸಾಂಬಾರೆಡ್ಡಿ (44), ಪಾಂಡುರಂಗರಾವು (42), ನರಸಿಂಹರಾವು (40) ಹಾಗೂ ಸತ್ಯಸಾಗರ್​ (10) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯರಾದ ಅನುರಾಧ, ಸುಪ್ರಿಯಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ರೈವರ್​ ಹೊರತು ಪಡಿಸಿ ಉಳಿದವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details