ಕರ್ನಾಟಕ

karnataka

By

Published : Mar 20, 2020, 8:40 AM IST

ETV Bharat / bharat

'ಭಾರತ್ ಮಾತಾ ಕೀ ಜೈ' ಘೋಷಣೆ ಮೊಳಗಿಸಿ ತಿಹಾರ್​ ಜೈಲು ಮುಂಭಾಗ ಸಿಹಿ ಹಂಚಿ ಸಂಭ್ರಮ

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಇಂದು ಬೆಳಗ್ಗೆ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಗಿದ್ದು, ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Nirbhaya case executed in Tihar jail,ತಿಹಾರ್​ ಜೈಲಿನ ಮುಂಭಾಗ ಸಿಹಿ ಹಂಚಿ ಸಂಭ್ರಮ
ತಿಹಾರ್​ ಜೈಲಿನ ಮುಂಭಾಗ ಸಿಹಿ ಹಂಚಿ ಸಂಭ್ರಮ

ನವದೆಹಲಿ:ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ದೆಹಲಿ ಗ್ಯಾಂಗ್​ ರೇಪ್ ಪ್ರಕರಣದ ಆಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಬೆಳಗ್ಗೆ 5:30ಕ್ಕೆ ತಿಹಾರ್​ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗಿದ್ದು,​ ಜೈಲಿನ ಮುಂಭಾಗ ಸಂಭ್ರಮ ಮನೆ ಮಾಡಿದೆ.

ಅಪರಾಧಿಗಳಾದ ಅಕ್ಷಯ್​ ಸಿಂಗ್​, ಪವನ್​ ಗುಪ್ತಾ, ಮುಕೇಶ್​​ ಸಿಂಗ್​ ಹಾಗೂ ವಿನಯ್​ ಶರ್ಮಾ ಅವರನ್ನು ಗಲ್ಲಿಗೇರಿಸಲಾಗಿದೆ. ಹೀಗಾಗಿ ತಿಹಾರ್​ ಜೈಲಿನ ಮುಂಭಾಗ ಸೇರಿದ್ದ ನೂರಾರು ಜನರು ಸಿಹಿ ವಿತರಣೆ ಮಾಡಿ ಸಂಭ್ರಮಿಸಿದ್ದಾರೆ. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯೋಗಿತಾ ಭಯನಾ ಸೇರಿದಂತೆ ದೆಹಲಿ ಜನತೆ ನೂರಾರು ಜನರಿಗೆ ಸಿಹಿ ಹಂಚಿದ್ದಾರೆ.

ABOUT THE AUTHOR

...view details