ಕರ್ನಾಟಕ

karnataka

ETV Bharat / bharat

ದಿಲ್ಲಿಯಲ್ಲಿ ನರೇಂದ್ರ, ಮುಂಬೈಯಲ್ಲಿ ದೇವೇಂದ್ರ; ನಮ್ಮ ಫಾರ್ಮೂಲಾ ಸೂಪರ್​ ಎಂದ ನಮೋ! - ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅಖಾಡಕ್ಕಿಳಿದು, ಬಿಜೆಪಿ ಪರ ಮತಯಾಚನೆ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

By

Published : Oct 16, 2019, 6:19 PM IST

ರಾಯಗಢ: ಮಹಾರಾಷ್ಟ್ರದ ರಾಯಗಢದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಛತ್ರಪತಿ ಶಿವಾಜಿಯವರನ್ನ ಹಾಡಿ ಹೊಗಳಿದ್ದು, ಅವರ ಆಡಳಿತ ನಿಜಕ್ಕೂ ಭಾರತ ಹೆಮ್ಮೆ ಪಡುವಂತಹದ್ದು ಎಂದರು.

ಮಹಾರಾಷ್ಟ್ರವನ್ನ ಅದ್ಭುತ ರಾಜ್ಯವನ್ನಾಗಿ ನಿರ್ಮಾಣ ಮಾಡುವಲ್ಲಿ ಛತ್ರಪತಿ ಶಿವಾಜಿಯವರ ಕೂಡುಗೆ ಅಪಾರವಾಗಿದೆ. ಅದೇ ರೀತಿ ಭಾರತವನ್ನ ಮಹಾನ್​ ರಾಷ್ಟ್ರವನ್ನಾಗಿ ಮಾಡುವಲ್ಲಿ ನವ ಮಹಾರಾಷ್ಟ್ರದ ಕೂಡುಗೆ ಅಪಾರವಾಗಿದೆ ಎಂದರು. ದೆಹಲಿಯಲ್ಲಿ ನೀವೂ ಈಗಾಗಲೇ ನರೇಂದ್ರನನ್ನ ಇನ್ನೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಿದ್ದೀರಿ. ಅದೇ ರೀತಿ ಮಹಾರಾಷ್ಟ್ರದಲ್ಲೂ ದೇವೇಂದ್ರನನ್ನು ಇನ್ನೊಮ್ಮೆ ಅಧಿಕಾರಿದ ಚುಕ್ಕಾಣಿ ಹಿಡಿದುಕೊಳ್ಳುವಂತೆ ಮಾಡಿ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರವನ್ನ ಅಭಿವೃದ್ದಿಯ ಹೊಸ ದೃಷ್ಠಿಕೋನದಂತೆ ತೆಗೆದುಕೊಂಡು ಹೋಗುತ್ತೇವೆ ಎಂದು ಭರವಸೆ ತುಂಬಿದರು.

ಪ್ರಧಾನಿ ನರೇಂದ್ರ ಮೋದಿ

ದೇವೇಂದ್ರ-ನರೇಂದ್ರ ಒಟ್ಟಾಗಿ ನಿಂತುಕೊಂಡರೆ 1+1+ ಎರಡು ಆಗಲ್ಲ ಬದಲಿಗೆ 11 ಆಗುತ್ತದೆ ಎಂದರು. ಕಳೆದ ಐದು ವರ್ಷಗಳಲ್ಲಿ ಫಾರ್ಮೂಲಾ ಆಫ್​ ನರೇಂದ್ರ ಆ್ಯಂಡ್​ ದೇವೇಂದ್ರ ಸೂಪರ್​ ಹಿಟ್​ ಆಗಿದೆ. ಮಹಾರಾಷ್ಟ್ರ ಅಭಿವೃದ್ದಿಯತ್ತ ಸಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ನಾವು ನೀಡಿದ್ದ ಎಲ್ಲ ಭರವಸೆ ಈಡೇರಿಸಿದ್ದು, ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು.

ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಹೊರಬಿಳಲಿದೆ.

ABOUT THE AUTHOR

...view details