ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಭೀಕರ ಪ್ರವಾಹ: 18 ಜನರ ಸಾವು, ಸಂಕಷ್ಟದಲ್ಲಿದ್ದಾರೆ 4.6 ಲಕ್ಷ ಜನ!

ಅಸ್ಸೋಂನ ಧೆಮಾಜಿ ಎಂಬಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ನಂತರದ ಸ್ಥಾನದಲ್ಲಿ ಟಿನ್ಸುಕಿಯಾ ಮತ್ತು ನಲ್ಬಾರಿ ಇದೆ. ಈ ಮೂರು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸ್ಥಳೀಯ ಆಡಳಿತವು ಪ್ರಾಣಾಪಾಯದಲ್ಲಿದ್ದ 261 ಜನರನ್ನು ರಕ್ಷಿಸಿದೆ.

By

Published : Jun 28, 2020, 3:24 PM IST

Assam
ಭೀಕರ ಪ್ರವಾಹ

ಗುವಾಹಟಿ (ಅಸ್ಸೋಂ): ಪ್ರವಾಹದಿಂದಾಗಿ ಈಶಾನ್ಯ ರಾಜ್ಯದ ಪರಿಸ್ಥಿತಿ ಅಯೋಮಯವಾಗಿದೆ. ಇಲ್ಲಿನ 21 ಜಿಲ್ಲೆಗಳಲ್ಲಿ 4.6 ಲಕ್ಷ ಜನರಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಕಸ ಪ್ರವಾಹ ಇಂದು ಮತ್ತೆರಡು ಜೀವಗಳನ್ನು ಬಲಿ ಪಡೆದುಕೊಂಡಿದೆ.

ಪ್ರವಾಹದ ನೀರಿನಿಂದಾಗಿ ಗೋಲ್ಪಾರ ಜಿಲ್ಲೆಯ ಬಲಿಜಾನಾ ಮತ್ತು ಮಾಟಿಯಾದಲ್ಲಿ ಎರಡು ಸಾವು ವರದಿಯಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತನ್ನ ದೈನಂದಿನ ಬುಲೆಟಿನ್​ನಲ್ಲಿ ತಿಳಿಸಿದೆ. ಈ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವಿಗೀಡಾದವರ ಸಂಖ್ಯೆ 18ಕ್ಕೆ ಏರಿದೆ.

ಭೀಕರ ಪ್ರವಾಹಕ್ಕೆ ತುತ್ತಾದ ಅಸ್ಸೋಂನ ದೃಶ್ಯಾವಳಿ..

ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಉದಲ್ಗುರಿ, ದಾರಂಗ್, ನಲ್ಬಾರಿ, ಬಾರ್ಪೆಟಾ, ಚಿರಾಂಗ್, ಬೊಂಗೈಗಾಂವ್, ಕೊಕ್ರಜಾರ್, ದಕ್ಷಿಣ ಸಲ್ಮಾರಾ, ಗೋಲ್ಪಾರ, ಕಮ್ರೂಪ್ ಹಾಗು ಮೊರಿಗಾಂವ್ ಪ್ರದೇಶಗಳಲ್ಲಿ 4.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ ಎಂದು ಎಎಸ್​ಡಿಎಂಎ ತಿಳಿಸಿದೆ.

ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ, ದಿಬ್ರುಗರ್​ ನಗರ ಸೇರಿದಂತೆ 1,289 ಗ್ರಾಮಗಳು ಮುಳುಗಿವೆ ಹಾಗೂ 37,313.46 ಹೆಕ್ಟೇರ್ ಬೆಳೆ ಪ್ರದೇಶ ಹಾನಿಯಾಗಿದೆ.

ಪ್ರವಾಹಕ್ಕೆ ತುತ್ತಾದ 19,496 ಜನರು ಆಶ್ರಯ ಪಡೆಯಲು 10 ಜಿಲ್ಲೆಗಳಲ್ಲಿ 132 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ.

ABOUT THE AUTHOR

...view details