ಕರ್ನಾಟಕ

karnataka

ETV Bharat / bharat

ಕೇರಳ: ವಿಶೇಷ ರೈಲುಗಳ ಮೂಲಕ ಊರಿಗೆ ಮರಳಿದ ವಲಸೆ ಕಾರ್ಮಿಕರು

ಬಿಹಾರ ಮೂಲದ 5,700 ಕಾರ್ಮಿಕರನ್ನು, ಕೇರಳದ ವಿವಿಧ ರೈಲುಗಳ ಮೂಲಕ ತಮ್ಮ ರಾಜ್ಯಕ್ಕೆ ಕರೆದೊಯ್ಯಲಾಗಿದೆ. ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಬೂನುಗಳನ್ನು ನೀಡಲಾಗಿದೆ.

By

Published : May 4, 2020, 7:52 AM IST

Updated : May 4, 2020, 8:38 AM IST

train
train

ತಿರುವನಂತಪುರಂ: ಕೇರಳದ ವಿವಿಧ ರೈಲು ನಿಲ್ದಾಣಗಳಿಂದ ಬಿಹಾರ ಮೂಲದ 5,700 ಕಾರ್ಮಿಕರನ್ನು ವಿಶೇಷ ರೈಲುಗಳ ಮೂಲಕ ತಮ್ಮ ರಾಜ್ಯಕ್ಕೆ ಕರೆದೊಯ್ಯಲಾಗಿದೆ.

ಎರ್ನಾಕುಲಂನಿಂದ ಬರುನಿ ಮತ್ತು ಮುಜಾಫರ್​ಪುರಕ್ಕೆ ಎರಡು ರೈಲುಗಳು, ತ್ರಿಶ್ಶೂರ್​​ನಿಂದ ದರ್ಬಂಗಾಕ್ಕೆ ಒಂದು ರೈಲು, ಕೋಯಿಕ್ಕೋಡ್​​ನಿಂದ ಕಟಿಹಾರ್​ಗೆ ಒಂದು ರೈಲು ಹಾಗೂ ಕಣ್ಣೂರಿನಿಂದ ಸಹರ್ಸಾಗೆ ಒಂದು ರೈಲು ಕೇರಳದಿಂದ ಹೊರಟಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಪ್ರತಿ ರೈಲಿನಲ್ಲಿ ಕೇವಲ 1,140 ಪ್ರಯಾಣಿಕರನ್ನು ಕರೆದೊಯ್ಯಲಾದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಬೂನುಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Last Updated : May 4, 2020, 8:38 AM IST

ABOUT THE AUTHOR

...view details