ನೆಲ್ಲೂರು (ಆಂಧ್ರಪ್ರದೇಶ): ಸರ್ಕಾರಿ ಶಾಲೆಯ ಮೈದಾನದಲ್ಲಿ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಿಸಿದ್ದ ಕಾರಣಕ್ಕಾಗಿ ಹೈದರಾಬಾದ್ ನಿವಾಸಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನೆಲ್ಲೂರು ಬಳಿಯ ಅನಂತಸಾಗರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹೈದರಾಬಾದ್ ನಿವಾಸಿಯಾದ ರಾಮಕೋಟೇಶ್ವರ ರಾವ್ ಎಂಬಾತ ತಮ್ಮ ಕುಟುಂಬದೊಂದಿಗೆ ಅನಂತಸಾಗರಂ ಮಂಡಲ್ನ ರೇವೂರು ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಭೇಟಿ ನೀಡಿ, ಅಲ್ಲಿನ ಬೋಯ್ನಾ ಜನಾರ್ಧನ ರೆಡ್ಡಿ ಎಂಬಾತನ ಪುತ್ರಿಯ ವಿವಾಹದಲ್ಲಿ ಪಾಲ್ಗೊಂಡಿದ್ದನು.
ಅಕ್ಟೋಬರ್ 27ರ ಮಧ್ಯಾಹ್ನ 2.30ಕ್ಕೆ ಸರ್ಕಾರಿ ಶಾಲಾ ಆವರಣದಲ್ಲಿ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಿದ್ದು, ವಿಷಯ ತಿಳಿದ ಅನಂತಪುರಂ ಎಂಆರ್ಒ ಹಾಗೂ ಆತ್ಮಕುರು ಆರ್ಡಿಓ ವಿಚಾರಣೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದೆ.
ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಅನುಮತಿ ಕೊಟ್ಟವರಾರು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರು ತಮಿಳುನಾಡಿನಲ್ಲಿದ್ದು, ಅವರು ಶುಕ್ರವಾರ ಬರುವ ಸಾಧ್ಯತೆಯಿದೆ. ಅವರು ಬಂದ ನಂತರ ವಿಚಾರಣೆ ನಡೆಸಲಾಗುತ್ತದೆ ಎಂದು ಅನಂತಸಾಗರಂ ಸಬ್ ಇನ್ಸ್ಪೆಕ್ಟರ್ ಸ್ಪಷ್ಟನೆ ನೀಡಿದ್ದಾರೆ.